Advertisement

Lingayat ಅನ್ಯಾಯ; ಸಾಂದರ್ಭಿಕವಾಗಿ ಹೇಳಿದ್ದನ್ನೇ ಎಳೆಯುತ್ತಿದ್ದೀರಿ : ಶಾಮನೂರು ಕಿಡಿ

07:47 PM Oct 20, 2023 | Team Udayavani |

ವಿಜಯಪುರ : ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದೆ ಎಂದು ಸಾಂದರ್ಭಿಕವಾಗಿ ಹೇಳಿದ್ದು, ಇದನ್ನೇ ವರ್ಷಪೂರ್ತಿ ಎಳೆಯುತ್ತಾ ಹೋಗುತ್ತೀರೇನು ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪ್ರಶ್ಬಿಸಿದ್ದು,ಸರ್ಕಾರದಲ್ಲಿ ಎಲ್ಲವೂ ಸರಿಯಲ್ಲಾ ವಿರೋಧ ಪಕ್ಷಗಳ ಆರೋಪದಲ್ಲಿ ಅರ್ಥವಿಲ್ಲ ಎಂದರು.

Advertisement

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಆಯಕಟ್ಟಿನ ಸ್ಥಾನ ಇಲ್ಲ ಎಂದು ಆಗ ಏನು ಬೇಕಾಗಿತ್ತೋ ಹೇಳಿದ್ದೆ.ಅದನ್ನೇ ವರ್ಷಪೂರ್ತಿ ಮುಂದುವರೆಸುವುದೇ, ಸಮಸ್ಯೆ ಆಗಿದ್ದನ್ನು ಸರಿ ಮಾಡಿಕೊಂಡು ಹೋಗುತ್ತಾರೆ ಎಂದರು.

ಸಚಿವ ಸತೀಶ ಜಾರಕಿಹೋಳಿ ಬಂಡಾಯದ ವಿಷಯ ನನಗೆ ಗೊತ್ತಿಲ್ಲ. ಯಾರೂ ಬಂಡಾಯ ಏಳುವಂಥದ್ದೇನೂ ಇಲ್ಲ. ಹೀಗಾಗಿ ಯಾರೂ ಹೋಗಲ್ಲ, ಏನೂ ಆಗಲ್ಲ. ಎಲ್ಲರೂ ಸರಿಯಾಗಿರುತ್ತಾರೆಂದು ಮಾಜಿ ಸಚಿವ ಶಿವಶಂಕರಪ್ಪ ಹೇಳಿದರು. ಮುಂದಿನ ಮುಖ್ಯಮಂತ್ರಿ ಡಿ‌.ಕೆ. ಶಿವಕುಮಾರ್ ಎಂದು ಕೆಲ ಶಾಸಕರ ಹೇಳಿರ ಬಹುದು, ಆದರೆ ಅದೇನಾಗತ್ತೋ ಮುಂದೆ ಬಂದದ್ದು ನೋಡೋಣ, ಈಗ್ಯಾಕೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next