Advertisement

ಸಂಭ್ರಮದಿಂದ ನಡೆದ ಲಿಂಗೈಕ್ಯ ಚನ್ನಬಸವ. ಶಿವಯೋಗಿಯ 71ನೇ ಜಾತ್ರೆ ರಥೋತ್ಸವ 

11:28 AM Mar 13, 2022 | Team Udayavani |

ಚಿಂಚೋಳಿ‌: ಪಟ್ಟಣದ ಪರಮಪೂಜ್ಯ ಲಿಂಗೈಕ್ಯ ಚನ್ನಬಸವ. ಶಿವಯೋಗಿಗಳವರ 71ನೇ ಜಾತ್ರೆ ರಥೋತ್ಸವ ಸಾವಿರಾರು ಭಕ್ತರ ಹಷೋದ್ಗಾರ ಮಧ್ಯೆ ಸಂಭ್ರಮದಿಂದ ಜರುಗಿತು.

Advertisement

ಪಟ್ಟಣದ ಮುಲ್ಲಾಮಾರಿ‌ ‌ನದಿ ದಂಡೆಯ ಪಂಚಲಿಂಗೇಶ್ವರ ಬುಗ್ಗಿ ಹತ್ತಿರದ ತೇರ ಮೈದಾನದಲ್ಲಿ ಪೂಜ್ಯ ಲಿ.ಚನ್ನಬಸವ ಶಿವಯೋಗಿಗಳವರ ಜಾತ್ರೆಯ ರಥೋತ್ಸವಕ್ಕೆ ಡಾ.ಚೆನ್ನವೀರ ಶಿವಾಚಾರ್ಯ ರವರು ವಿಶೇಷ ಪೂಜೆಯನ್ನು ಸಲ್ಲಿಸಿ  ಚಾಲನೆ ನೀಡಿದರು.

ಬಸವಕಲ್ಯಾಣ, ಕಲಬುರಗಿ, ಹುಮನಾಬಾದ,ಬೀದರ್, ಸೇಡಂ ತಾಲೂಕಿನ ಅನೇಕ ಗ್ರಾಮಗಳಿಂದ ಆಗಮಿಸಿದ ಭಕ್ತರು ತೇರಿನ ಮೇಲೆ ಹೂವು ಹಣ್ಣು, ಉತ್ತುತ್ತಿ,ಬೆಂಡು ಬತಾಸ ಎಸೆದು ತಮ್ಮ ಭಕ್ತಿಯನ್ನುಅರ್ಪಿಸಿದರು.

ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್, ಶಾಸಕ ಡಾ.ಅವಿನಾಶ ಜಾಧವ್,ಸಂಜೀವನ ಯಾಕಾಪುರ, ಗೌತಮ ಪಾಟೀಲ, ಡಾ.ವಿಕ್ರಮ ಪಾಟೀಲ, ಸುಭಾಷ ಠೋಡ,ಸಂತೋಷ ಗಡಂತಿ,ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ,ಉಪಾಧ್ಯಕ್ಷ ಶಬ್ಬೀರ ಅಹೆಮದ್,ಸುಭಾಷ್ ಸೀಳಿನ, ರಾಜಶೇಖರ ‌ಮಜಗಿ, ರೇವಣಸಿದ್ದ ಮಜ್ಜಗಿ,ಇಒ ಅನೀಲ ರಾಠೋಡ, ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next