Advertisement

ರಾಂಪುರ ನಾಲೆ ಕಾಮಗಾರಿ ಕಳಪೆ : ಕ್ರಮಕ್ಕೆ ಆಗ್ರಹ

04:10 PM Jul 04, 2020 | Naveen |

ಲಿಂಗಸುಗೂರು: ರಾಂಪುರ ಏತ ನೀರಾವರಿ ನಾಲೆಯಲ್ಲಿ ನಡೆಯುತ್ತಿರುವ ನಿರ್ವಹಣೆ ಕಾಮಗಾರಿ ಕಳಪೆಯಿಂದ ಕೂಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಗುರುವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ರಾಂಪುರ ನಾಲೆಯ ಮುಖ್ಯ, ವಿತರಣಾ ನಾಲೆಯಲ್ಲಿ ನಡೆಯುತ್ತಿರುವ ಜಂಗಲ್‌ ಕಟಿಂಗ್‌, ಹೂಳೆತ್ತುವುದು, ಎಸ್‌ಆರ್‌ ರಸ್ತೆಯ ಮರಂ ಹಾಕುವ ಕಾಮಗಾರಿ ಬೇಕಾಬಿಟ್ಟಿಯಾಗಿ ನಡೆಯುತ್ತಿದ್ದು, ಗುತ್ತಿಗೆದಾರರು ತಮ್ಮ ಮನಸ್ಸೋ ಇಚ್ಛೆಯಂತೆ ಕಾಮಗಾರಿ ಮಾಡುತ್ತಿರುವುದರಿಂದ ಕಾಮಗಾರಿಯಲ್ಲಿ ಗುಣಮಟ್ಟ ಕಣ್ಮರೆಯಾಗಿದೆ. ಕೂಡಲೇ ಬಿಲ್‌ ತಡೆಹಿಡಿದು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು. ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಸದಾನಂದ ಮಡಿವಾಳ, ಬಿ.ಆರ್‌.ಪಾಟೀಲ, ಖಾಜಾವಲಿ ನಂದಿಹಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next