Advertisement
ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿ ಹಾಗೂ ಬಸ್ ನಿಲ್ದಾಣದ ವೃತ್ತದಲ್ಲಿ ಜಾಗೃತಿ ಮೂಡಿಸಿದ ಅವರು, ಲಿಂಗಸುಗೂರು ಪಟ್ಟಣದಲ್ಲಿ ಕೇರಳ ಮೂಲದ ವ್ಯಾಪಾರಿಗೆ ಸೋಂಕು ಪತ್ತೆಯಾಗಿದೆ. ಅವರ ಅಂಗಡಿಗಳಾದ ಅತಿಥಿ ಬೇಕರಿ, ಬಾಲನ್ ಕಿರಾಣಿ ಅಂಗಡಿ, ಪ್ಯಾಶನ್ ವಿಲೇಜ್ ಬಟ್ಟೆ ಅಂಗಡಿ ಹಾಗೂ ಎಸ್ಎಲ್ವಿ ಬೇಕರಿಗಳಲ್ಲಿ ವಹಿವಾಟು ನಡೆಸಿದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕೋವಿಡ್ ಸೋಂಕು ತಡೆಗೆ ಆಡಳಿತದೊಂದಿಗೆ ಸಹಕಾರ ಮಾಡಬೇಕು. ಇದರಿಂದ ದ್ವಿತೀಯ ಸಂಪರ್ಕದಲ್ಲಿರುವವರ ಪತ್ತೆ ಸಹಕಾರ ನೀಡಿದಂತಾಗುತ್ತಿದೆ ಎಂದು ಹೇಳಿದರು.
ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಇದ್ದರು.