Advertisement

ಪಂಜಿಕಲ್ಲು: ಸಿಡಿಲು ಬಡಿದು ಶೆಡ್ಡ್ ಭಸ್ಮ

10:51 PM Nov 13, 2021 | Team Udayavani |

ಬಂಟ್ವಾಳ: ತಾಲೂಕಿನ ಪಂಜಿಕಲ್ಲು ‌ಗ್ರಾಮದಲ್ಲಿ ಸಿಡಿಲು ಬಡಿದು ಪಂಪು ಶೆಡ್ಡ್ ಭಸ್ಮಗೊಂಡ ಘಟನೆ ಶನಿವಾರ ರಾತ್ರಿ ನಡೆಸಿದೆ.

Advertisement

ಗ್ರಾಮದ ಎನಿಲಕೋಡಿಯ ಕೃಷಿಕ ನಾರಾಯಣ ಸಪಲ್ಯ ಅವರ ತೋಟದ ಶೆಡ್ಡಿಗೆ ರಾತ್ರಿ ವೇಳೆ ಸಿಡಿಲು ಬಡಿದಿದ್ದು, ಶೆಡ್ ಸಂಪೂರ್ಣ ಹೊತ್ತಿ ಉರಿದಿದೆ. ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.

ಶೆಡ್ ನಲ್ಲಿದ್ದ ಅಡಿಕೆ, ತೆಂಗಿನಕಾಯಿ, ಮರದ ತುಂಡುಗಳು ಸುಟ್ಟು ಹೋಗಿವೆ. ಅಂದಾಜು ಸುಮಾರು ೪ ಲಕ್ಷ ರೂ‌. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next