Advertisement

UV Fusion: ವಿದ್ಯುತ್‌ ಇಲ್ಲದ ಬದುಕು

12:42 PM Feb 21, 2024 | Team Udayavani |

ಮನುಕುಲದ ಶ್ರೇಷ್ಠ ತಾಂತ್ರಿಕ ಆವಿಷ್ಕಾರಗಳಲ್ಲಿ ವಿದ್ಯುತ್‌ ಶಕ್ತಿಯು ಒಂದು. ವಿದ್ಯುತ್‌ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಡೀ ಜಗತ್ತನ್ನು ವಿದ್ಯುತ್ತನಿಂದ ಬೆಳಗಿಸಲು ವಿದ್ಯುತ್ತನ್ನು ಕಂಡುಹಿಡಿದವರು ಥಾಮಸ್‌ ಆಲ್ವಾ ಎಡಿಸನ್‌. ಕತ್ತಲೆಯನ್ನು ಹೋಗಿಸಿ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮಾಡಿಕೊಳ್ಳಲು ಸಹಾಯ ಮಾಡಿತು.

Advertisement

ಹಿಂದಿನ ಕಾಲದಲ್ಲಿ ವಿದ್ಯುತ್‌ ಇರಲಿಲ್ಲ ಅವರು ಅದಕ್ಕೆ ಹೊಂದಿಕೊಂಡಿದ್ದರು. ಆದರೆ ಇಂದಿನ ಕಾಲದಲ್ಲಿ ವಿದ್ಯುತ್‌ ಇಲ್ಲದೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ನಾವು ವಿದ್ಯುತ್‌ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಒಂದು ದಿನ ವಿದ್ಯುತ್‌ ಇಲ್ಲದೆ ಹೋದರೆ ಯಾವ ಕಾರ್ಯವು ಆಗದಂತೆ ಅನಿಸುತ್ತದೆ.

ಮೊಬೈಲ್‌ ಫೋನ್‌ ಚಾರ್ಜ್‌ ಮಾಡುವ ಸಣ್ಣ ಕೆಲಸದಿಂದ ಹಿಡಿದು ಕೈಗಾರಿಕೆಯತಂಹ ದೊಡ್ಡ ಕೆಲಸಗಳಿಗೆ ಇಂದು ವಿದ್ಯುತ್‌ ಅವಶ್ಯಕತೆ ಇದೆ. ಮನೆಯಲ್ಲಿರುವ ಬಹುತೇಕ ಎಲ್ಲ ವಸ್ತುಗಳು ವಿದ್ಯುತ್ತನ್ನು ಅವಲಂಬಿಸಿದೆ.

ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್‌ ಸರಬರಾಜಿನ ಅಗತ್ಯವಿರುತ್ತದೆ. ವಿದ್ಯುತ್‌ ಸರಬರಾಜು ಇಲ್ಲದ ಹೋದರೆ ಕೈಗಾರಿಕೆಗಳನ್ನು ಮುಚ್ಚಬೇಕಾಗುತ್ತದೆ. ಇನ್ನು ಕೈಗಾರಿಕೆಗಳನ್ನು ಮುಚ್ಚಿದರೆ ಉತ್ಪನ್ನಗಳ ಕೊರತೆ ಉಂಟಾಗುತ್ತದೆ. ಇದು ಉತ್ಪಾದಕತೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪಾದನೆಯು ವಿದ್ಯುತ್‌ ಮೇಲೆ ಅವಲಂಬಿತ ವಾಗಿರುವುದರಿಂದ ಅವುಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ.

ಆಸ್ಪತ್ರೆಗಳಿಗೂ ಕಷ್ಟವಾಗುತ್ತದೆ. ಕಾಯಿಲೆಗೆ ಒಳಗಾದ ಜನರನ್ನು ಉಳಿಸಿಕೊಳ್ಳುವುದು ಕಷ್ಟ. ಏಕೆಂದರೆ ವ್ಯಕ್ತಿಯು ಯಾವ ಕಾಯಿಲೆಗೆ ಒಳಗಾಗಿದ್ದಾನೆ ಎಂದು ವೈದ್ಯರು ತಿಳಿದುಕೊಳ್ಳಲು ಉಪಯೋಗಿಸುವ ಕೆಲವು ಉಪಕರಣಗಳಿಗೂ ವಿದ್ಯುತ್‌ ಬೇಕಾಗುತ್ತದೆ. ಯಾವುದಾದರೂ ವ್ಯಕ್ತಿಗೆ ತುರ್ತು ಚಿಕಿತ್ಸೆಬೇಕಾದರೆ ಆಂಬುಲೆನ್ಸ್ ಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ.

Advertisement

ನಾವು ಈಗ ಉಪಯೋಗಿಸುತ್ತಿರುವ ಬಲ್ಪ್ಗಳನ್ನು ಬಿಟ್ಟು ಮೊದಲಿನ ಹಾಗೆ ಮಣ್ಣಿನ ದೀಪವನ್ನು ಬಳಸಬೇಕಾಗುತ್ತದೆ. ನಮ್ಮ ಶಕ್ತಿಯನ್ನೇ ಉಪಯೋಗಿಸಿ ಕೆಲಸ ಮಾಡಬೇಕಾಗುತ್ತದೆ. ವಿದ್ಯುತ್‌ ಇಂದ ವೇಗವಾಗಿ ಆಗುವ ಎಲ್ಲಾ ಕೆಲಸಗಳು ವಿದ್ಯುತ್‌ ಇಲ್ಲದೆ ಹೋದರೆ ನಿಧಾನವಾಗಿ ಆಗುತ್ತವೆ.

ದೇಶದಲ್ಲಿ ಆಗುವ ಯಾವುದೇ ಘಟನೆಯನ್ನು ಮತ್ತು ಅಂತರಾಷ್ಟ್ರೀಯ ಸುದ್ದಿಯನ್ನು ತಿಳಿದುಕೊಳ್ಳಲು ಕಷ್ಟವಾಗುತ್ತದೆ. ನಮ್ಮ ದೂರದ ಸಂಬಂಧಿಗಳು ಹೇಗಿದ್ದಾರೆ ಎಂದು ವಿಚಾರಿಸಲು ನಾವು ಅಂಚೆ ಸಹಾಯವನ್ನೇ ಪಡೆಯಬೇಕು.

ನಮ್ಮ ತತ್‌ ಕ್ಷಣದ ಭಾಗವೆಂದರೆ ಸಾರಿಗೆ ಅವೆಲ್ಲವೂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಅವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ನಾವು ಮೊದಲಿನಂತೆ ಕಾಲಿನಲ್ಲಿ, ಎತ್ತಿನಗಾಡಿಯಲ್ಲಿ ಹೋಗಬೇಕಾಗುತ್ತದೆ. ದೊಡ್ಡ ದೊಡ್ಡ ನಗರಗಳೆಲ್ಲವೂ ವಿದ್ಯುತ್ತನ್ನು ಅವಲಂಬಿಸಿದ್ದರಿಂದ ಅವುಗಳಿಗೆ ನಷ್ಟವಾಗುತ್ತದೆ.

ಹೀಗಾಗಿ ವಿದ್ಯುತ್‌ ನಮ್ಮ ಜೀವನದ ಮೂಲಭೂತ ಅವಶ್ಯಕತೆಯಾಗಿದೆ. ಎಲ್ಲಿ ಬೆಳಕಿದೆಯೋ ಅಲ್ಲಿ ಜೀವ ವಿರುತ್ತದೆ. ಆದರೆ ನಾವು ವಿದ್ಯುತ್ತನ್ನು ಸಂಪೂರ್ಣವಾಗಿ ವರವಾಗಿ ತೆಗೆದುಕೊಳ್ಳದೆ ಎಚ್ಚರಿಕೆಯಿಂದ ಬಳಸಬೇಕಾದ ಸಂಪನ್ಮೂಲವಾಗಿ ಗೌರವಿಸಬೇಕು.

- ಪಲ್ಲವಿ ಹೆಗಡೆ

ಬಪ್ಪನಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next