Advertisement

ಜೀವ ಬೆದರಿಕೆ: ಎಸ್‌ಪಿಗೆ ಟಪಾಲ್‌ ಗಣೇಶ್‌ ದೂರು

08:10 AM Aug 23, 2017 | Team Udayavani |

ಬಳ್ಳಾರಿ: “ನನಗೆ ಜೀವ ಬೇದರಿಕೆ ಇದೆ. ನನ್ನ ಹತ್ಯೆ ಮಾಡಲು ಸುಪಾರಿ ನೀಡಲಾಗಿದೆ’ ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಕಂಪ್ಲಿ ಶಾಸಕ ಸುರೇಶ್‌ಬಾಬು ವಿರುದಟಛಿ ಗಂಭೀರ ಆರೋಪ ಮಾಡಿದ್ದಾರಲ್ಲದೆ ಈ ಸಂಬಂಧ ಮಂಗಳವಾರ
ಎಸ್‌ಪಿ ಆರ್‌. ಚೇತನ್‌ ಅವರಿಗೆ ದೂರು ಸಲ್ಲಿಸಿದ್ದಾರೆ. ಅಕ್ರಮ ಗಣಿಗಾರಿಕೆ ವಿರೋಧಿಸಿ 2004 ರಿಂದ ಒಎಂಸಿ
ಮಾಲೀಕ ಜನಾರ್ದನರೆಡ್ಡಿ ಟೀಂ ವಿರುದಟಛಿ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. 2010ರ ಮಾ.29ರಂದು
ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ಗಡಿ ಗುರುತಿಸಲು ಆಗಮಿಸಿದ್ದ ಸರ್ವೇ ಆಫ್‌ ಇಂಡಿಯಾದ ಅ ಧಿಕಾರಿಗಳ ಜತೆ
ಚರ್ಚಿಸಲು ನಗರದ ಬಾಲಾ ರೆಸಿಡೆನ್ಸಿ ಹೋಟೆಲ್‌ಗೆ ಆಗಮಿಸಿದ್ದಾಗ ರೆಡ್ಡಿ ಬೆಂಬಲಿಗರಾದ ಕಾರದಪುಡಿ ಮಹೇಶ್‌
ಮತ್ತು ಸ್ವಸ್ತಿಕ್‌ ನಾಗರಾಜ್‌ ಗುಂಪಿನಿಂದ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ
ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಪ್ರಕರಣದ ನಂತರ ಅಂದಿನ ಎಸ್‌ಪಿ ನನಗೆ ಇಬ್ಬರು ಗನ್‌ಮೆನ್‌ಗಳ ರಕ್ಷಣೆ ಒದಗಿಸಿದ್ದರು.

Advertisement

ಈಗಲೂ ಒಬ್ಬ ಗನ್‌ ಮೆನ್‌ ರಕ್ಷಣೆಯನ್ನು ನನಗೆ ನೀಡಲಾಗಿದೆ. ರೆಡ್ಡಿ ವಿರುದಟಛಿ ಹಲವು ಪ್ರಕರಣಗಳಲ್ಲಿ ನಾನು
ಸಾಕ್ಷಿಯಾಗಿದ್ದೇನೆ. ಹೀಗಾಗಿ ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಟಪಾಲ್‌ ಗಣೇಶ್‌ ದೂರಿನಲ್ಲಿ
ಆರೋಪಿಸಿದ್ದಾರೆ.

ಇನ್ನು ಹತ್ತು ದಿನಗಳಲ್ಲಿ ನನ್ನ ಮೇಲೆ ಹಲ್ಲೆ ನಡೆಯಲಿದೆ ಎಂಬ ಮಾಹಿತಿ ಆಪ್ತ ಮೂಲಗಳಿಂದ ತಿಳಿದಿದೆ. ನನ್ನ ಮತ್ತು ನನ್ನ ಕುಟುಂಬಕ್ಕೆ ಜೀವ ಭಯ ಇರುವ ಕಾರಣ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಬೇಕು ಎಂದು ಅವರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next