Advertisement

ಬದುಕು ಬದಲಿಸಬಲ್ಲ ಸಿನಿಮಾ ಹಾಡುಗಳು

09:00 PM Mar 05, 2018 | |

ಆಸೆಯೆಂಬ ಬಿಸಿಲುಕುದುರೆ ಏಕೆ ಏರುವೆ?
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ … ವಿನೋದವಾಗಲಿ …
ಅದೇನೆ ಆಗಲೀ, ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೆ? 

Advertisement

ಚಿತ್ರರಂಗದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ. ಕೆಲವು ಹಾಡುಗಳು ಸಂಗೀತದಿಂದ, ಇನ್ನು ಕೆಲವು ಅವುಗಳ ಸಾಹಿತ್ಯದಿಂದ ಗಮನಸೆಳೆಯುತ್ತವೆ. ಹಾಡುಗಳೇ ಚಿತ್ರವನ್ನು ಗೆಲ್ಲಿಸಿಬಿಡುತ್ತವೆ. ಅದಕ್ಕೆ ಉದಾಹರಣೆಗಳೂ ಇವೆ. 

ಕನ್ನಡ ಚಿತ್ರರಂಗದ ಮಟ್ಟಿಗೆ ಅನೇಕ ಚಿತ್ರಸಾಹಿತಿಗಳ ಹಾಡು ಇಂದಿಗೂ ಸ್ಮರಣೀಯ. ಸಾಹಿತ್ಯದ ದೃಷ್ಟಿಯಿಂದ ನೋಡಿದಾಗ ಕನ್ನಡ ಗೀತ ಸಾಹಿತ್ಯ ಉನ್ನತವಾಗಿಯೇ ಇದೆ. ಕು.ರ.ಸೀ., ವಿಜಯನಾರಸಿಂಹ, ಸೋರಟ್‌ ಅಶ್ವಥ್‌, ಚಿ. ಉದಯಶಂಕರ್‌, ಆರ್‌.ಎನ್‌. ಜಯಗೋಪಾಲ್‌, ಹಂಸಲೇಖ ಅವರಂತಹ ಹಿರಿಯರ ಹಾಡಿನ ಸಾಲುಗಳನ್ನು ನೆನೆಯದವರಿಲ್ಲ.

ಇಂಪಾದ, ಮನಸ್ಸಿಗೆ ಮುದ ನೀಡುವ ಹಾಡುಗಳು ಎಂದಿಗೂ ಜನ ಮಾನಸದಲ್ಲಿ ತಮ್ಮದೇ ನೆಲೆ ಕಂಡುಕೊಂಡಿವೆ. ಕೆಲವು ಚಿತ್ರಗಳು, ಹಾಡುಗಳು ಅನೇಕರ ಬದುಕನ್ನೇ ಬದಲಿಸಿವೆ. ಹಾಡಿಗೆ ಸಂಗೀತ ಹೇಗೋ, ಸಾಹಿತ್ಯವೂ ಹಾಗೇ ಮುಖ್ಯ. ಸರಳ, ಎಲ್ಲರಿಗೂ ಅರ್ಥವಾಗುವ ಪದಗಳ ಮೂಲಕ ರೂಪ ತಳೆದ ಹಾಡುಗಳು ಕೇವಲ ಕೇಳಲಷ್ಟೇ ಅಲ್ಲ, ಆ ಅರ್ಥಪೂರ್ಣ ನುಡಿಗಳು ಜೀವನ ಸಾರವನ್ನು ತಿಳಿಸುತ್ತವೆ.

ಅಂತಹ ಹಾಡುಗಳ ವಿಶೇಷ ಪುಟಗಳು ಈ ಬಾರಿಯ “ರೂಪತಾರಾ’ದ ಸ್ಪೆಷಾಲಿಟಿ. ಈ ಹಾಡುಗಳು ಸಾಹಿತ್ಯ ಹಾಗೂ ಸಂಗೀತದ ದೃಷ್ಟಿಯಿಂದ ಮಹತ್ವ ಪಡೆದಂಥವು. ಬೇಸರವಾದಾಗ ಈ ಹಾಡುಗಳನ್ನು ಕೇಳುತ್ತಿದ್ದರೆ, ಅವು ಮನಸ್ಸಿಗೆ ಹಿತ ನೀಡುತ್ತವೆ, ನೀತಿ ಹೇಳುತ್ತವೆ. ಮಾರ್ಗದರ್ಶಕ ಪದಗಳ ಗಾರುಡಿ ಈ ಹಾಡುಗಳಲ್ಲಿವೆ. ಬದುಕು ಬದಲಿಸಬಲ್ಲ ಅಂತಹ ಹಲವು ಅಪರೂಪದ ಹಾಡುಗಳ್ಯಾವುವು ಎಂಬ ಕುತೂಹಲವಿದ್ದರೆ, ಮಾರ್ಚ್‌ ತಿಂಗಳ “ರೂಪತಾರಾ’ ಓದಿ ಆನಂದಿಸಿ …

Advertisement

ಹುಟ್ಟು-ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲೀ?
ಹೂವು-ಮುಳ್ಳು ಎರಡು ಉಂಟು ಬಾಳಲತೆಯಲಿ!
ದುರಾಸೆಯೇತಕೆ? ನಿರಾಸೆಯೇತಕೆ?
ಅದೇನೆ ಬಂದರೂ, ಅವನ ಕಾಣಿಕೆ!

Advertisement

Udayavani is now on Telegram. Click here to join our channel and stay updated with the latest news.

Next