Advertisement

ಲಂಬಾಣಿ ಜನಾಂಗದಿಂದ ಪತ್ರ ಚಳವಳಿ

06:52 AM Jun 11, 2020 | Suhan S |

ಬೈಲಹೊಂಗಲ: ಲಂಬಾಣಿ, ಭೋವಿ, ಕೊರಚ, ಕೊರಮ ಉಪಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರತೆಗೆಯುವುದನ್ನು ವಿರೋಧಿಸಿ ಲಂಬಾಣಿ ಜನಾಂಗದವರು ಪತ್ರ ಚಳವಳಿ ನಡೆಸಿದ್ದಾರೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬುಧವಾರ ಅಂಚೆ ಮೂಲಕ ಪತ್ರಗಳನ್ನು ರವಾನಿಸಿದ್ದಾರೆ. ಪಟ್ಟಣದ ಮುಖ್ಯ ಅಂಚೆ ಕಚೇರಿ ಮುಂಭಾಗದಲ್ಲಿ ಪತ್ರ ಚಳವಳಿ ನಡೆಸಿದ ಲಂಬಾಣಿ ಸಮುದಾಯವರು, ಸದಾಶಿವ ಆಯೋಗದಲ್ಲಿ ಲಂಬಾಣಿ ಜನಾಂಗದ ಜೊತೆ ಉಪಜಾತಿಗಳನ್ನು ಪಟ್ಟಿಯಿಂದ ಹೊರ ತೆಗೆಯುವಂತೆ ಸೂಚಿಸಿರುವ ಕ್ರಮ ತೀವ್ರ ಖಂಡನೀಯ. ಕೂಡಲೇ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಸೂಚನೆಯನ್ನು ಹಿಂಪಡೆಯಬೇಕು. ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಲಂಬಾಣಿ ಸಮುದಾಯದ ಮುಖಂಡರಾದ ಬಿ.ವೈ. ನಾಯ್ಕ, ಗುರು ಕಾರಬಾರಿ, ಶಿವಾನಂದ ರಜಪೂತ, ಕೃಷ್ಣ ಲಮಾಣಿ, ಸೋಮು ಲಮಾಣಿ, ಕುಮಾರ ನಾಯ್ಕ, ದಯಾನಂದ ಲಮಾಣಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next