Advertisement

ದಯಾಮರಣ ಕೋರಿ ಕೈದಿಗಳಿಂದ ಪತ್ರ

11:22 AM Aug 17, 2018 | |

ಬೆಂಗಳೂರು: ಕಳೆದ 16-20 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 10ಕ್ಕೂ ಹೆಚ್ಚು ಮಂದಿ ಕೈದಿಗಳು ತಮ್ಮ ಅವಧಿ ಪೂರ್ವ ಬಿಡುಗಡೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನೊಂದು, ತಮಗೆ ದಯಾಮರಣ ಅನುಮತಿ ನೀಡುವಂತೆ ಕೋರಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

Advertisement

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾರಾಗೃಹದಲ್ಲಿರುವ ಕೈದಿಗಳಾದ ರಾಮಮೂರ್ತಿ, ಕೃಷ್ಣ, ತಿಮ್ಮಪ್ಪ, ಅನಂತಮೂರ್ತಿ, ಉಮೇಶ್‌, ಮಂಜುನಾಥ್‌, ಉದಯ್‌, ಶಿವಕುಮಾರ್‌ ಸೇರಿ 10ಕ್ಕೂ ಅಧಿಕ ಮಂದಿ ಕೈದಿಗಳು ಅವರ ಸಂಬಂಧಿಕರ ಮೂಲಕ ಸಿಎಂ ಕುಮಾರಸ್ವಾಮಿ ಅವರ ಜನತಾದರ್ಶನದಲ್ಲಿ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಗೃಹ ಇಲಾಖೆ ಅರ್ಜಿಗಳನ್ನು ಪರಿಗಣಿಸಿ ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಕಾರಾಗೃಹಗಳ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ ಸೂಚಿಸಿದೆ.

15ರಿಂದ 20 ವರ್ಷಗಳಿಂದ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತ ಹಿರಿಯ ಅಧಿಕಾರಿಗಳ ಅಜ್ಞಾನುವರ್ತಿಗಳಾಗಿದ್ದರೂ, ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುತ್ತಿಲ್ಲ. ಹೊಸ ಜೀವನಕ್ಕೆ ಮನಸ್ಸು ಮಾಡಿರುವ ನಮ್ಮನ್ನು ದಯಮಾಡಿ ಬಿಡುಗಡೆ ಮಾಡಿ, ಇಲ್ಲವೆ, ದಯಮರಣಕ್ಕೆ ಅನುಮತಿ ನೀಡಿ ಎಂದು ಕೈದಿಗಳು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next