Advertisement

ಯಡಿಯೂರಪ್ಪಗೆ ಸತ್ಯ ಹೇಳುವ ಧೈರ್ಯ ಇಲ್ಲ;ಸಿಎಂ ಸವಾಲು 

11:37 AM Dec 14, 2017 | Team Udayavani |

ಬೀದರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಗುರುವಾರ ಮತ್ತೆ  ಸವಾಲು ಹಾಕಿದ್ದು,’ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲು ಧೈರ್ಯ ಇಲ್ಲ’ ಎಂದು ಕಿಡಿ ಕಾರಿದ್ದಾರೆ. 

Advertisement

‘ಯಡಿಯೂಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಜೈಲಿಗೆ ಹೋಗಿ  ಬಂದವರಿಗೆ ಯಾರಾದರು ಮತ ಹಾಕಲು ಸಾಧ್ಯವಿದೆಯೇ? ಅವರು ಅಧಿಕಾರಕ್ಕೆ ಬರಲು ಸಾಧ್ಯವೆ?’ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. 

‘ಭ್ರಷ್ಟಾಚಾರ, ಅಭಿವೃದ್ಧಿ ಕುರಿತಾಗಿ ಯಡಿಯೂರಪ್ಪ ಅವರಿಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲು ಸಾಧ್ಯವಿಲ್ಲ. ಯಾಕೆಂದರೆ  ಅವರಿಗೆಸತ್ಯ ಹೇಳಲು  ಧೈರ್ಯವಿಲ್ಲ’ ಎಂದು ಲೇವಡಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next