Advertisement

ಸ್ಥಳೀಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸೋಣ…

01:41 PM Jul 25, 2021 | Team Udayavani |

ಮನಸಿದ್ದರೆ ಸಾಲದು ಮಾಸಕ್ಕೊಂದು ಪ್ರವಾಸವಿರಬೇಕು. ಕಣ್ಣಲ್ಲಿ ಗುರಿ ಇದ್ದರೆ ಸಾಲದು ಜಗತ್ತಿನ ವಿಸ್ಮಯ ನೋಡುವ ಕನಸಿರಬೇಕು. ಸಾಮಾನ್ಯವಾಗಿ ನಾವು ಮಾಸ ಪೂರ್ತಿ ದುಡಿದು ಅಥವಾ ಓದಿ ಅಥವಾ ಬೇರೊಂದನ್ನು ಮಾಡಿ ಬೇಸರಗೊಂಡಿರುತ್ತೇವೆ. ಮನದಲ್ಲಿ ಆಸೆ ಇಲ್ಲದಿದ್ದರೂ ಕಣ್ಣಿಗೆ ಹೊಸದೊಂದು ನೋಡುವ ಹಂಬಲವಿರುತ್ತದೆ. ಎಷ್ಟೇ ಸುಸ್ತಾದರು, ಪ್ರವಾಸವೆಂದರೆ ತಟ್ಟನೆ ಎದ್ದು ಬರುತ್ತೇವೆ. ಅದರಲ್ಲೂ ಮನೆಯವರ ಜತೆಗೆ ಹೋಗುವುದೆಂದರೆ ಅದೇನೋ ಹೆಚ್ಚಿನ ಖುಷಿ.

Advertisement

ಗುರಿಗಿಂತ ಹಾದಿ ಸುಗಮ ಎನ್ನುವ ಹಾಗೆ ಹೋಗುವ ತಾಣಕ್ಕಿಂತ ಹಾದಿಯಲ್ಲಿ ಮಜ ವಿರುತ್ತದೆ. ಅದರಲ್ಲೂ ಮನೆಯವರ ಜತೆಗೆ ಕೆಲವೊಂದು ಹೇಳಲು ಆಗದಿರುವ ಮಾತುಗಳು ಕೂಡ ಹಂಚಿಕೊಳ್ಳಲು ಸಮಯವಿರುತ್ತದೆ. ಒಟ್ಟಾರೆ ಹಾಡು ಹೇಳುತ್ತಾ, ಮಾತನಾಡುತ್ತಾ, ನಗಿಸಿ ನಗುತ್ತಾ ಮೋಜಿನ ಪ್ರವಾಸದಲ್ಲಿ ಜಗತ್ತನ್ನೇ ಮರೆತು ಹೋಗುತ್ತೇವೆ. ಪ್ರವಾಸವೆಂದರೆ ದೂರದ ಸ್ಥಳಗಳಿಗೆ ಹೋಗುವುದು ಎಂಬುದು ನಮ್ಮ ಭಾವನೆ. ಆದರೆ ಹತ್ತಿರದ ಸ್ಥಳಗಳನ್ನು ಮನೋರಂಜನೆಯ ತಾಣವಾಗಿ ಪರಿವರ್ತಿಸಿ ನಾವು ಹೋಗುವುದರ ಜತೆಗೆ ಇತರ ಊರಿನ ಪ್ರವಾಸಿಗರನ್ನು ಆಕರ್ಷಿಸಬಹುದು.

ಸಾಮಾನ್ಯವಾಗಿ ನಮ್ಮ ಹತ್ತಿರವಿರುವ ವಸ್ತುವಿನ ಮಹತ್ವ ನಮಗೆ ಅರಿವಿರುವುದಿಲ್ಲ. ಆದರೆ ದೂರವಿರುವರಿಗೆ ಅದರ ಮಹತ್ವ ಗೊತ್ತಿರುತ್ತದೆ. ಹಾಗೆಯೇ ನಮ್ಮ ಊರಿನಲ್ಲಿ ಇರುವ ತಾಣ ಅಥವಾ ಪ್ರವಾಸ ಮಾಡುವ ವಿಸ್ಮಯ ಸ್ಥಳಗಳ ಮಹತ್ವವನ್ನು ನಾವು ಹೆಚ್ಚಾಗಿ ಅರಿತಿರುವುದಿಲ್ಲ. ಪಕ್ಕದಲ್ಲಿಯೇ ಇದ್ದರೂ ಅದರ ಮಹತ್ವ ಮತ್ತು ಅದರ ವೈಶಿಷ್ಟ್ಯ ನಮಗೆ ಗೊತ್ತಿರುವುದಿಲ್ಲ. ಬೇರೆ ಊರಿನ ತಾಣಗಳ ವೈಶಿಷ್ಟéಗಳನ್ನು ತಿಳಿದಿರುವ ನಾವು ನಮ್ಮೂರಿನ ಕೆಲವು ವೈಶಿಷ್ಟ್ಯ ಗಳನ್ನು ನೋಡಿರುವುದಿಲ್ಲ. ಅಂತಹ ವೈಶಿಷ್ಟéಗಳನ್ನು ಹೊಂದಿರುವ ಸ್ಥಳವೇ ವಿಜಯಪುರದ ಭುತ್ನಾಳ ಕೆರೆ.

ವಿಜಯಪುರದಲ್ಲಿ ಸುಮಾರು 12 ವರ್ಷಗಳಿಂದ ವಾಸ ಮಾಡುತ್ತಿದ್ದೇನೆ. ಆದರೆ ಈ ಕೆರೆಗೆ ಬೆರಳೆಣಿಕೆಯ ಸಂಖ್ಯೆಯಷ್ಟು ಬಾರಿ ಮಾತ್ರ ಭೇಟಿ ನೀಡಿದ್ದೇನೆ. ಭುತ್ನಾಳ್‌ ಕೆರೆ ಮಳೆಗಾಲದಲ್ಲಿ ಉಕ್ಕಿ ಹರಿಯುತ್ತದೆ. ಮುಂಭಾಗದಲ್ಲಿರುವ ಕಟ್ಟೆಯ ಮೇಲಿಂದ ಕೆಳಗೆ ನೀರು ಬೀಳುವ ನೋಟ ಸಣ್ಣ ಜಲಪಾತದಂತೇ ಕಾಣುತ್ತದೆ. ಕೆರೆಯ ಬಳಿಯಲ್ಲಿ ಉದ್ಯಾನವಿರುವುದು ಇಲ್ಲಿನ ಮತ್ತೂಂದು ವಿಶೇಷ. ವಿಶಾಲವಾದ ಈ ಉದ್ಯಾನ ಗಿಡ ಮರಗಳಿಂದ ತುಂಬಿ ಹಚ್ಚು ಹಸಿರಾಗಿದೆ. ಮಕ್ಕಳಿಗೆ ಆಟವಾಡಲು ಆಟದ ಸಾಮಗ್ರಿಗಳಿವೆ. ಪ್ರಕೃತಿ ಪ್ರೇಮಿಗಳನ್ನು ಈ ಸ್ಥಳ ವಿಶೇಷವಾಗಿ ಆಕರ್ಷಿಸುತ್ತದೆ. ಇದೊಂದು ಉದಾಹರಣೆ ಮಾತ್ರ.

 

Advertisement

-ಪೃಥ್ವಿರಾಜ ಕುಲಕರ್ಣಿ

ಎಸ್‌ಬಿ, ಕೆಸಿಪಿ ಮಹಾವಿದ್ಯಾಲಯ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next