Advertisement

ಬರಹಗಾರರು ಸಮಾಜದ ಆಗು ಹೋಗುಗಳಿಗೆ ಸ್ಪಂದಿಸಲಿ

08:50 PM Mar 22, 2021 | Team Udayavani |

ಕಲಬುರಗಿ: ಕವಿ, ಸಾಹಿತಿ, ಕಲಾವಿದ, ಲೇಖಕರು ಸಮಾಜದ ಆಗುಹೋಗುಗಳಿಗೆ ಸದಾ ಸ್ಪಂದಿಸಬೇಕು ಎಂದು ಮಾಜಿ ಮಾಜಿ ಶಾಸಕ ಬಿ.ಆರ್‌. ಪಾಟೀಲ ಹೇಳಿದರು.

Advertisement

ಆಳಂದ ಸಾಸಿರನಾಡು ಸಾಹಿತ್ಯ-ಸಾಂಸ್ಕೃತಿಕ ವೇದಿಕೆ, ಬಸವೇಶ್ವರ ಸಮಾಜ ಸೇವಾ ಬಳಗದ ಆಶ್ರಯದಲ್ಲಿ ನಗರದ ಚೇಂಬರ್‌ ಆಪ್‌ ಕಾಮರ್ಸ್‌ ಸಭಾಂಗಣದಲ್ಲಿ ರವಿವಾರ ವಿಶ್ವನಾಥ ಭಕರೆ ರಚಿಸಿದ “ಶಿವರುದ್ರಯ್ಯನ ಶಿವತಾಂಡವ’ ಕಥಾ ಸಂಕಲನ ಜನಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿನ ಅನುಭವಗಳೇ ಕಥಾವಸ್ತುವಾಗಬೇಕು. ಅಂದಾಗ ಆ ಕಥೆಗಳಿಗೆ ಗಟ್ಟಿತನ ಬರುತ್ತದೆ. ಪ್ರತಿಯೊಂದು ಗ್ರಾಮಕ್ಕೂ ಅದರದ್ದೇ ಆದ ಇತಿಹಾಸವಿರುತ್ತದೆ. ಅಂತಹ ಗ್ರಾಮೀಣ ಪ್ರದೇಶದ ಇತಿಹಾಸ ಹೊರತರಬೇಕು ಎಂದು ಹೇಳಿದರು. ಕೃತಿ ಜನಾರ್ಪಣೆ ಮಾಡಿ ಮಾತನಾಡಿದ ಡಾ| ಕಾಶಿನಾಥ ಅಂಬಲಗಿ, ಪುಸ್ತಕಗಳು ಜ್ಞಾನದ ಭಂಡಾರ. ಬರಹಗಾರರಾದವರು ಹೆಚ್ಚು ಓದಬೇಕು. ಸುಸಂಸ್ಕೃತ ಮತ್ತು ಶ್ರೇಷ್ಠ ಸಂಸ್ಕೃತಿ ಕಟ್ಟುವ ಜವಾಬ್ದಾರಿ ಲೇಖಕರ ಮೇಲಿದೆ ಎಂದು ಹೇಳಿದರು. ಕೃತಿ ಕುರಿತು ಮಾತನಾಡಿದ ಪತ್ರಕರ್ತ ಲೇಖಕ ಡಾ| ಶಿವರಂಜನ್‌ ಸತ್ಯಂಪೇಟೆ, ಶಿವರುದ್ರಯ್ಯನ ಶಿವತಾಂಡವ ಸಂಕಲನದ ಕಥೆಗಳು ನೈಜ ಘಟನೆ ಆಧರಿಸಿವೆ ಎಂದರು. ಪ್ರೊ| ಆರ್‌.ಕೆ. ಹುಡಗಿ ಅಧ್ಯಕ್ಷತೆ ವಹಿಸಿದ್ದರು.

ಬಂಡಾಯ ಸಾಹಿತಿ ಡಾ| ಪ್ರಭು ಖಾನಾಪುರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಪ್ರಕಾಶಕ ಬಸವರಾಜ ಕೊನೇಕ್‌ ಮಾತನಾಡಿದರು. ವೇದಿಕೆ ಹಾಗೂ ಬಳಗದ ಪದಾಧಿ ಕಾರಿಗಳಾದ ನರಸಪ್ಪ ಬಿರಾದಾರ, ರಾಜಶೇಖರ ಮರಡಿ, ಗಣೇಶ ಪಾಟೀಲ., ಡಾ| ಸೂರ್ಯಕಾಂತ ಪಾಟೀಲ, ಎಚ್‌ .ಬಿ. ಪಾಟೀಲ ವೇದಿಕೆಯಲ್ಲಿದ್ದರು. ಸಂಜಯ ಪಾಟೀಲ ನಿರೂಪಿಸಿದರು. ಲಕ್ಷ್ಮಿಕಾಂತ ಬೀದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next