Advertisement

ತುಳುಭಾಷೆಗೆ ಮಾನ್ಯತೆ ದೊರೆಯಲಿ: ಶಶಿಧರ ಬಿ. ಶೆಟ್ಟಿ

06:06 PM Jan 08, 2020 | Team Udayavani |

ಮುಂಬಯಿ, ಜ. 7: ಪರಶುರಾಮನ ಸೃಷ್ಟಿಯ ತುಳುನಾಡು ಸಾಮರಸ್ಯದ ಗೂಡು ಎಂದೆಣಿಸಿ ಜಾಗತಿಕವಾಗಿ ಹೆಸರು ಮಾಡಿದ ಮಾಧುರ್ಯತಾ ಮತ್ತು ಗೌರವಸ್ಥ ನಾಡಾಗಿದೆ. ಇಂತಹ ತುಳುನಾಡಿನಲ್ಲಿ ಹಲವಾರು ಜನಾಂಗದ ಜನತೆ ವಾಸವಾಗಿದ್ದರೂ ಮಾತೃಭಾಷೆಗಿಂತಲೂ ತುಳುಭಾಷೆಯನ್ನೇ ಪ್ರಧಾನವಾಗಿಸಿ ಸೌಹಾರ್ದತಾ ಭಾವದಿಂದ ಬದುಕುತ್ತಿದ್ದಾರೆ. ಬಹುಜನಾಂಗಿಯರ ಈ ತುಳುಭಾಷೆಗೆ ಮೊದಲಾಗಿ ರಾಜ್ಯ ಮತ್ತು ರಾಷ್ಟ್ರ ಮನ್ನಣೆ ಅತ್ಯವಶ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಕರ್ಮಭೂಮಿ ಗುಜರಾತ್‌ನಲ್ಲಿ ತುಳು ಭಾಷಾಭಿಯಾನ ಸೇರಿದಂತೆ ಇನ್ನಿತರ ಭಾಷೆಯ ಉಳಿವಿನ ಕಾರ್ಯಕ್ರಮಗಳಿಗಾಗಿ ಸುಮಾರು ಒಂದು ಕೋಟಿ ವೆಚ್ಚ ಮಾಡಲಾಗುವುದು ಎಂದು ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್‌ ಬಿ. ಶೆಟ್ಟಿ ಗುರುವಾಯನಕೆರೆ ತಿಳಿಸಿದರು.

Advertisement

ಜ. 5ರಂದು ಬರೋಡಾದ ಗುಜರಾತ್‌ ರಿಫೈನರಿ ಕಮ್ಯುನಿಟಿ ಸಭಾಗೃಹದಲ್ಲಿ ನಡೆದ ತುಳು ಸಂಘ ಬರೋಡಾ ಇದರ 31ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರೋಡಾ ತುಳು ಸಂಘವು ಕಳೆದ ಮೂರು ದಶಕಗಳಿಂದ ನಾಡು-ನುಡಿ, ಭಾಷೆಯ ಬೆಳವಣಿಗೆಗೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಸಂಘದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ತುಳುವರು ಒಗ್ಗಟ್ಟಿನಿಂದ ಭಾಗವಹಿಸಿದಾಗ ಸಂಘಟನೆ ಮತ್ತಷ್ಟು ಬಲಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ತುಳುವರ ಮನೆ-ಮನಗಳಿಗೆ ಮುಟ್ಟಿಸುವ ಕಾರ್ಯದಲ್ಲಿ ನಾವೆಲ್ಲರು ತೊಡಗೋಣ ಎಂದರು, ಸಂಘದ ಮತ್ತು ಶಶಿ ಶೆಟ್ಟಿ ಅಭಿಮಾನಿ ಬಳಗದ ಪರವಾಗಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಗೆ 1 ಲ. ರೂ. ಗಳ ದೇಣಿಗೆ ನೀಡಿದರು.

ಗುಜರಾತ್‌ನ ಹಿರಿಯ ಉದ್ಯಮಿ, ಸಂಘಟಕ, ಸಮಾಜ ಸೇವಕ ಜಯರಾಮ ಶೆಟ್ಟಿ ಸುರತ್ಕಲ್‌ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿಮಾತನಾಡಿ, ಸುಮಾರು ಮೂರು ದಶಕಗಳ ಹಿಂದೆ ಸಮಾನ ಮನಸ್ಕ ತುಳುವರಾದ ನಾವು ಬರೋಡಾದಲ್ಲಿ ತುಳು ಸಂಘ ಅಸ್ತಿತ್ವಕ್ಕೆ ತರುವಾಗಲೇ ನಮ್ಮ ಮಾತೃಭಾಷಾ ವಿಸ್ತರಣೆ ಜತೆಗೆ ಸ್ವಸಂಸ್ಕೃತಿಯ ಉಳಿವನ್ನು ಬಯಸಿದ್ದೇವು. ಅಂದಿನ ನಮ್ಮ ಚಿಂತನೆಯನ್ನು ಇಂದಿನ ಯುವ ಪೀಳಿಗೆ ಮನವರಿಸಿ ಮುನ್ನಡೆಸುತ್ತಿದ್ದಾರೆ. ನಮ್ಮ ಯೋಚನೆಗಳನ್ನು ಪರಿಪೂರ್ಣಗೊಳಿಸುವಲ್ಲಿ ಪರಶುರಾಮನ ಅವತಾರ ಎಂಬಂತೆ ಶಶಿಧರ ಶೆಟ್ಟಿ ಅವರ ಸಾರಥ್ಯ ಲಭಿಸಿದ್ದು, ತುಳುವರ ಭಾಗ್ಯವೇ ಸರಿ ಎಂದು ನುಡಿದರು.

ಸಮಾರಂಭದಲ್ಲಿ ಅತಿಥಿ ಅಭ್ಯಾಗತರಾಗಿ ತುಳು ಸಂಘ ಅಹ್ಮದಾಬಾದ್‌ ಗೌರವಾಧ್ಯಕ್ಷ ಮೋಹನ್‌ ಸಿ. ಪೂಜಾರಿ, ತುಳುನಾಡ ಐಸಿರಿ

ವಾಪಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅಂಕ್ಲೇಶ್ವರ ಅಧ್ಯಕ್ಷ ಶಂಕರ್‌ ಕೆ. ಶೆಟ್ಟಿ, ಕರ್ನಾಟಕ ಸಮಾಜ ಸೂರತ್‌ ಅಧ್ಯಕ್ಷ ದಿನೇಶ್‌ ಶೆಟ್ಟಿ, ಗೌರವಾನ್ವಿತ ಅತಿಥಿಗಳಾಗಿ ಸೂರತ್‌ನ ಉದ್ಯಮಿ, ಸಮಾಜ ಕಾರ್ಯಕರ್ತ ರಾಧಾಕೃಷ್ಣ ಶೆಟ್ಟಿ, ತುಳು ಸಂಘ ಅಂಕಲೇಶ್ವರ ಗೌರವಾಧ್ಯಕ್ಷ ರವಿನಾಥ್‌ ವಿ. ಶೆಟ್ಟಿ, ತುಳು ಸಂಘ ಅಹ್ಮದಾಬಾದ್‌ ಅಧ್ಯಕ್ಷ ಅಪ್ಪು ಎಲ್‌. ಶೆಟ್ಟಿ, ಪಟ್ಲ ಫೌಂಡೇಶನ್‌ ಗುಜರಾತ್‌ ಘಟಕದ ಅಧ್ಯಕ್ಷ ಅಜಿತ್‌ ಎಸ್‌. ಶೆಟ್ಟಿ, ತುಳು ಸಂಘ, ಬಂಟರ ಸಂಘ ಅಹ್ಮದಾಬಾದ್‌ ಅಧ್ಯಕ್ಷ ನಿತೇಶ್‌ ಶೆಟ್ಟಿ, ಬಿಲ್ಲವ ಸಂಘ ಗುಜರಾತ್‌ ಅಧ್ಯಕ್ಷ ಮನೋಜ್‌ ಸಿ. ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಜಯರಾಮ ಶೆಟ್ಟಿ ಇವರಿಗೆ ಅಭಿನಂದನಾ ಗೌರವದೊಂದಿಗೆ “ತುಳುರತ್ನ’ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿ ಶುಭಹಾರೈಸಿದರು.

Advertisement

ಅತಿಥಿಗಳು ಸಾಂದರ್ಭಿಕವಾಗಿ ಮಾತನಾಡಿ ತುಳು ಸಂಘದ ಕಾರ್ಯವೈಖರಿಯನ್ನು ಪ್ರಶಂಸಿಸಿ ತುಳುರತ್ನ ಪುರಸ್ಕೃತ ಜಯರಾಮ ಶೆಟ್ಟಿ ಅವರ ಅನುಪಮ ಸೇವೆ ಸ್ಮರಿಸಿ ಅಭಿನಂದಿಸಿ ಶತಾಯುಷ್ಯ ಹಾರೈಸಿದರು. ತುಳು ಸಂಘ ಬರೋಡಾ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಪುರಸ್ಕೃತರನ್ನು ಪರಿಚಯಿಸಿದ್ದು, ಜಿನರಾಜ್‌ ಪೂಜಾರಿ ಸಮ್ಮಾನ ಪತ್ರ ವಾಚಿಸಿದರು.

ಸಂಘದ ಪುಟಾಣಿಗಳು ಪ್ರಾರ್ಥನೆಗೈದರು. ಕೋಶಾಧಿಕಾರಿ ವಾಸು ಪೂಜಾರಿ, ಮಹಿಳಾಧ್ಯಕ್ಷೆ ಡಾ| ಶರ್ಮಿಳಾ ಎಂ. ಜೈನ್‌, ಮಹಿಳಾ ಕಾರ್ಯದರ್ಶಿ ಮಂಜುಳಾ ಬಿ. ಗೌಡ ಸೇರಿದಂತೆ ಇತರ ಪದಾಧಿಕಾರಿಗಳು ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾಧ್ಯಕ್ಷೆಡಾ| ಶರ್ಮಿಳಾ ಎಂ. ಜೈನ್‌ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಳು ಸಂಘದ ಸದಸ್ಯೆಯರು, ಮಕ್ಕಳು ವೈವಿಧ್ಯಮಯ ನೃತ್ಯಾವಳಿ, ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಚಾಲಿತ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಕಲಾವಿದರಿಂದ “ಬೇಡರ ಕಣ್ಣಪ್ಪ’ ಯಕ್ಷಗಾನ ಪ್ರದರ್ಶನಗೊಂಡಿತು. ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಮುದ್ದು ಅಂಚನ್‌ ಮತ್ತು ಗಂಗಾಧರ ಸುವರ್ಣ ಭಾಗವತಿಕೆಯಲ್ಲಿ ಸಹಕರಿಸಿದರು. ಜಯರಾಮ ಶೆಟ್ಟಿ ಸುರತ್ಕಲ್‌ ಮತ್ತು ಕುಸುಮ ಜಯರಾಮ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.

 

ಚಿತ್ರ-ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next