Advertisement

ಸರ್ಕಾರಿ ಯೋಜನೆಗಳ ಸದ್ಬಳಕೆಯಾಗಲಿ: ಐಹೊಳೆ

10:05 AM Jul 27, 2020 | Suhan S |

ರಾಯಬಾಗ: ಪರಿಶಿಷ್ಟ ಜನಾಂಗದ ರೈತರು ಆರ್ಥಿಕವಾಗಿ ಸದೃಢರಾಗಲು ಸರಕಾರ ಗಂಗಾಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

Advertisement

ನಂದಿಕುರಳಿ ಗ್ರಾಮದ ಬಾರಿಕೋಡಿ ತೋಟದಲ್ಲಿ ಪರಿಶಿಷ್ಟ ಜಾತಿ ಜನಾಂಗದ 10 ರೈತರ 30 ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ 1.50 ಕೋಟಿ ರೂ. ವೆಚ್ಚದಲ್ಲಿ ಗಂಗಾಕಲ್ಯಾಣ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ.ಜಾತಿ, ಜನಾಂಗದ ರೈತರು ತಮ್ಮ ಜಮೀನುಗಳನ್ನು ನೀರಾವರಿ ಮಾಡಿಕೊಂಡು, ಉತ್ತಮ ಬೆಳೆ ಬೆಳೆದು ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಬೇಕು. ಸರಕಾರ ಪರಿಶಿಷ್ಟರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದು ಮುಂದೆ ಬರಬೇಕೆಂದರು. ಸದಾಶಿವ ಘೋರ್ಪಡೆ, ಪೃಥ್ವಿರಾಜ ಜಾಧವ, ಶ್ರವಣ ಕಾಂಬಳೆ, ರಾಜು ಕಾಂಬಳೆ, ಅಮಿತ ಜಾಧವ, ರೇವಣ್ಣ ಕಾಂಬಳೆ, ಸುಭಾಷ ಕಾಂಬಳೆ, ರಮೇಶ ಕಾಂಬಳೆ, ಬಸವಂತ ಕಾಂಬಳೆ, ಮಲ್ಲಪ್ಪ ಕಾಂಬಳೆ, ಸುರೇಶ ಉಮ್ರಾಣಿ, ಅಭಿಯಂತ ಎಸ್‌.ಎಸ್‌.ಮಕಾನೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next