Advertisement

ಹೆಬ್ಬಾಳ್ಕರ ಕುಕ್ಕರ್ ಹಂಚಿದ್ದು ಯಾರ ದುಡ್ಡಿನಿಂದ ಅಂತ ಆಣೆ ಮಾಡಲಿ: ಜಾರಕಿಹೊಳಿ‌

02:16 PM Jul 08, 2020 | mahesh |

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಕುಕ್ಕರ್ ಹಂಚಿದ್ದು ಯಾರ ದುಡ್ಡಿಂದ ಅಂತ ಆಣೆ ಪ್ರಮಾಣ ಮಾಡಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಸವಾಲು ಹಾಕಿದ್ದಾರೆ.

Advertisement

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ದುಡ್ಡು ಕೊಟ್ಟಿಲ್ಲ ಅಂತ ಆಣೆ ಪ್ರಮಾಣ ಮಾಡಿ ಹೇಳಲಿ. ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತರಲು ವಾಸ್ತವ ಸ್ಥಿತಿ ಹೇಳಿದ್ದೇ‌ನೆ. ಇದ್ದಕ್ಕಿದ್ದಿದ್ದನ್ನು ಹೇಳಿದರೆ ತಪ್ಪೇನಿಲ್ಲ. ನನ್ನ ದುಡ್ಡಿನಲ್ಲಿಯೇ ಹೆಬ್ಬಾಳಕರ ಅವರ ಮನೆ ದೇವರು ಹಟ್ಟಿಹೊಳಿ ಶ್ರೀ ವೀರಭದ್ರೇಶ್ವರನ ಮೇಲೆ ಆಣೆ ಮಾಡಲಿ. ನನ್ನ ಮನೆ ದೇವರು ಕೊಲ್ಲಾಪುರ ಶ್ರೀ ಮಹಾಲಕ್ಷ್ಮೀ ದೇವರ ಮೇಲೆ ಆಣೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಲಕ್ಷ್ಮೀ ಹೆಬ್ಬಾಳ್ಕರ್ ವ್ಯಕ್ತಿತ್ವ ಬೆಳಗಾವಿ ಜಿಲ್ಲೆಯ ಮೂಲೆ ಮೂಲೆಗೂ ಗೊತ್ತಿರುವ ವಿಷಯ. ನಮ್ಮ ರಣತಂತ್ರ ಏನೆಂಬುದು ಮುಂದೆ ಚುನಾವಣೆಯಲ್ಲಿ ತೋರಿಸುತ್ತೇನೆ. ಕಾನೂನು ಹೋರಾಟಕ್ಕೆ ನಾನೂ ಸಿದ್ಧನಿದ್ದೇನೆ. ಹೆಬ್ಬಾಳಕರ ನೀಡಿರುವ ಹೇಳಿಕೆಗಳಿಗೆ ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ನೀಡುತ್ತೇನೆ. ಇನ್ನೂ ಸಾಕಷ್ಟು ವಿಷಯಗಳು ಹೇಳಲು ಬಾಕಿ ಇವೆ ಎಂದು ಹೇಳಿದರು.

ನನ್ನ ಉಪಕಾರ ಇಲ್ಲದೇ ಆಯ್ಕೆ ಆಗಿರುವುದಾಗಿ ಜನರ ಮುಂದೆ ಹೇಳಿ ಆಣೆ ಮಾಡಲಿ. ಲಕ್ಷ್ಮೀ ಹೆಬ್ಬಾಳಕರ ಹೇಗೆ ಗೆದ್ದಳು ಎನ್ನುವುದು ರಾಜ್ಯಕ್ಕೇ ಗೊತ್ತಿದೆ. ಹೆಬ್ಬಾಳ್ಕರ ಯಾರಿಂದ ಗೆದ್ದು ಬಂದಿದ್ದನ್ನು ಹೇಳಲಿ. ಆ ಹೆಣ್ಣು ಮಗಳಿಗೆ ರಾಜಕಾರಣ ಗೊತ್ತಿಲ್ಲ. ಬುಡಾ ಮೆಂಬರ್ ಮಾಡು ಅಂತ ಬಳಿ ಕಾಲಿಗೆ ಬಿದ್ದು ಕೇಳಿದ್ದು ನಾನು ಮರೆತಿಲ್ಲ. ಲಿಂಗಾಯತ ಹೆಣ್ಣು ಮಗಳು ಬೆಳೆಯಲಿ ಎಂಬ ಒಳ್ಳೆಯ ಉದ್ದೇಶಕ್ಕೆ ಸಹಾಯ ಮಾಡಿದ್ದೆ ಎಂದು ರಮೇಶ ತಿರುಗೇಉ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next