Advertisement

ಪ್ರವಾಹ ಹಾಗೂ ಬರ ಪೀಡಿತ ರೈತರ ಸಾಲ ಮನ್ನಾ ಮಾಡಲಿ: ವಿ.ಎಸ್. ಉಗ್ರಪ್ಪ

02:35 PM Sep 16, 2019 | keerthan |

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ರೈತ ನಾಯಕ ಅಂತ ಹೇಳಿ ಹಸಿರು ಟವಲ್ ಹಾಕಿಕೊಂಡು ಅಧಿಕಾರ ಸ್ವೀಕರಿಸಿದ್ದಾರೆ.ರೈತರು ಪ್ರವಾಹದಿಂದ ಬರದಿಂದ ತತ್ತರಿಸಿ ಹೋಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ 8163 ಕೋಟಿ ಸಾಲ ಮನ್ನಾ , ಕುಮಾರಸ್ವಾಮಿ ಸರ್ಕಾರದಲ್ಲಿ ಒಂದು ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಕೃಷಿಕರ ಬಗ್ಗೆ ಕಾಳಜಿ ಇದ್ದರೆ ಪ್ರವಾಹ ಹಾಗೂ ಬರ ಪೀಡಿತ ರೈತರ ಸಾಲ ಮನ್ನಾ ಮಾಡಲಿ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಆಗ್ರಹ ಮಾಡಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿ.ಎಸ್. ಉಗ್ರಪ್ಪ, ರಾಜ್ಯ ಹಾಗೂ ಕೇಂದ್ರದ ಮಂತ್ರಿಗಳು ಪ್ರಹ್ಲಾದ್ ಜೋಷಿ, ಈಶ್ವರಪ್ಪ, ಲಕ್ಷ್ಮಣ ಸವದಿ ಅವರ ಹೇಳಿಕೆ ನೋಡಿದರೆ ಇವರಿಗೆ ಅಧಿಕಾರದ ಮದ ಹೆಚ್ಚಿದೆ. ಕಾಂಗ್ರೆಸ್ ನವರು ಬ್ಲೂ ಫಿಲ್ಮ್ ಮಾಡುತ್ತಾರೆ, ನಾನು ನೋಡಿದೀನಿ ಎಂದು ಸವದಿ ಹೇಳಿದ್ದಾರೆ. ಅದನ್ನು ಸಚಿವರು ಬಹಿರಂಗ ಪಡೆಸಬೇಕು. ಇಲ್ಲಾಂದ್ರೆ ಮಾಹಿತಿ ಬಚ್ಚಿಡುವುದು ಅಪರಾಧವಾಗುತ್ತದೆ ಎಂದರು.

ಸಚಿವ ಈಶ್ವರಪ್ಪ ಅವರು ಕಾಂಗ್ರೆಸ್ ನವರ ಪುರುಷತ್ವದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಪುರುಷತ್ವ ಇದ್ದರೆ, ಧಮ್ ಇದ್ದರೆ ತಕ್ಷಣ ಕೇಂದ್ರ ಸರ್ಕಾರದ ಮೂಲಕ ಬೀಫ್ ರಫ್ತಾಗುವುದನ್ನು ನಿಲ್ಲಿಸಲು ಸೂಚನೆ ನೀಡೆಬೇಕು ಎಂದು ಆಗ್ರಹ ಮಾಡಿದರು.

ಹಿಂದಿ ಹೇರಿಕೆ ಬಗ್ಗೆ ಮಾತನಾಡಿದ ಅವರು ಬಿಜೆಪಿಯವರು ಒಂದು ಭಾಷೆ ಒಂದು ರಾಷ್ಟ್ರ ಎಂದು ಹೇಳುತ್ತಾರೆ. ಅವರಿಗೆ ಸಂವಿಧಾನದಲ್ಲಿ ಗೌರವ ಇದ್ದರೆ ಅವರು ತಕ್ಷಣ ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next