Advertisement
ಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ ಪರ್ಯಾಯ ಪಲಿಮಾರು ಮಠ, ಪೇಜಾವರ ಅಧೋಕ್ಷಜ ಮಠದ ವತಿಯಿಂದ ಪೇಜಾವರ ಶ್ರೀಗಳ ಜನ್ಮನಕ್ಷತ್ರದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಜಯಶ್ರೀ, ಶ್ರೀ ರಾಮವಿಠಲ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಶ್ರೀರಾಮವಿಠಲ ಪ್ರಶಸ್ತಿಯನ್ನು ಉದಯವಾಣಿಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ (ಛಾಯಾಚಿತ್ರಗ್ರಹಣ), ಕೆ. ರಾಘವೇಂದ್ರ ರಾವ್ (ಶಾಸ್ತ್ರೀಯ ಸಂಗೀತ), ಪಿ. ಲಕ್ಷ್ಮೀನಾರಾಯಣ ಭಟ್ (ಪಾಕಶಾಸ್ತ್ರ), ಎಚ್. ಶಾಂತರಾಜ ಐತಾಳ (ಸಾಹಿತ್ಯ), ದಿವಾಕರ್ ರೈ ಸಂಪಾಜೆ, ಬೇಗಾರು ಶಿವಕುಮಾರ್, ಶಶಿಕಾಂತ ಶೆಟ್ಟಿ ಕಾರ್ಕಳ, ಚಂದ್ರಶೇಖರ ಧರ್ಮಸ್ಥಳ (ಯಕ್ಷಗಾನ), ಸುಬ್ರಹ್ಮಣ್ಯ ರಾವ್ (ಚಿತ್ರಕಲೆ), ಉಡುಪಿ ಜನಾರ್ದನ್ (ವಾದ್ಯಸಂಗೀತ), ಡಾ| ಜಯಂತ ಭಟ್ (ವೈದ್ಯಕೀಯ), ಲಕ್ಷ್ಮೀ ಗುರುರಾಜ್ (ನೃತ್ಯ) ಅವರಿಗೆ ನೀಡಿ ಸಮ್ಮಾನಿಸಲಾಯಿತು. ಪ್ರಶಸ್ತಿಯು 10,000 ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
Related Articles
Advertisement