Advertisement

ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವಂತಾಗಲಿ

03:13 PM Jun 23, 2022 | Team Udayavani |

ಭಾಲ್ಕಿ: ಪರಿಣಾಮಕಾರಿ ಬೋಧನೆ ಮೂಲಕ ಉತ್ತಮ ಶಿಕ್ಷಕರು ನಿರ್ಮಾಣವಾಗುತ್ತಾರೆ. ಅಂಥ ಶಿಕ್ಷಕರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಬಿತ್ತುವಂತಾಗಲಿ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮನೋಹರ ಹೋಳಕರ್‌ ಹೇಳಿದರು.

Advertisement

ತಾಲೂಕಿನ ಲಾಧಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಮತ್ತು ಹೊಸದಾಗಿ ಬಂದವರ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ರಾಜಕುಮಾರ ಜೋಳದಾಬಕೆ ಮಾತನಾಡಿ, ವರ್ಗಾವಣೆಗೊಂಡ ಶಿಕ್ಷಕಿ ಗೋದಾವರಿ ಅವರು ಉತ್ತಮ ಸೇವೆ ಮೂಲಕ ಇಲಾಖೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ ಪಾಟೀಲ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಸಂಘದ ಪ್ರಮುಖರಾದ ಸುಭಾಷ ಹುಲಸೂರೆ, ಬಸವರಾಜ ಮಡಿವಾಳ, ಅಶೋಕ ಕುಂಬಾರ, ಬಸವರಾಜ ಬಡದಾಳೆ, ಸಂತೋಷಕುಮಾರಿ ವಾಡೆ, ದತ್ತು ಮುದಾಳೆ, ಬಾಲಾಜಿ ಬೈರಾಗಿ, ಚಂದ್ರಕಾಂತ ತಳವಾಡೆ, ರಂಜೀತಸಿಂಗ್‌ ಠಾಕೂರ, ಸಂತೋಷ ವಾಡೆ, ಸತ್ಯವಾನ್‌, ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ ದೇಗಲೆ, ಗ್ರಾಪಂ ಅಧ್ಯಕ್ಷೆ ಪಂಚಾಬಾಯಿ, ಗೋದಾವರಿ ಕೋಡ್ಲಿ, ಲಕ್ಷ್ಮೀ ಟಿಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next