Advertisement

ರಾಜೀವ್‌ಗಾಂಧಿ ಕನಸು ನನಸಾಗಿಸೋಣ

06:40 PM May 22, 2021 | Team Udayavani |

ತುಮಕೂರು: ಭಾರತವನ್ನು ಪ್ರಪಂಚದಲ್ಲಿಯೇ ಬಲಿಷ್ಠರಾಷ್ಟ್ರವಾಗಿ ರೂಪಿಸಬೇಕೆಂಬ ಕನಸು ಕಂಡವರು ಮಾಜಿಪ್ರಧಾನಿ ದಿ. ರಾಜೀವ್‌ಗಾಂಧಿ ಅವರು, ವಿಜ್ಞಾನ ಮತ್ತುತಂತ್ರಜ್ಞಾನದ ಮೂಲಕ ದೇಶವನ್ನು ವೈಜ್ಞಾನಿಕವಾಗಿಕಟ್ಟುವ ಮಹದಾಸೆ ಅವರದಾಗಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ಭವನದಲ್ಲಿ ಆಯೋಜಿಸಿದ್ದ ಮಾಜಿಪ್ರಧಾನಿದಿ.ರಾಜೀವ್‌ಗಾಂಧಿ 31ನೇಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜೀವ್‌ಗಾಂಧಿ ಆದರ್ಶಗಳನ್ನು ಕಾಂಗ್ರೆಸ್‌ನ ಮುಖಂಡರು,ಕಾರ್ಯಕರ್ತರು ಪಾಲಿಸುವ ಮೂಲಕ ಅವರ ಭವ್ಯಭಾರತದ ಕನಸನ್ನು ನನಸು ಮಾಡಬೇಕಾಗಿದೆ ಎಂದರು.ಭಾರತದ ಯುವಜನತೆಯ ಮೇಲೆಅಪಾರ ನಂಬಿಕೆಇಟ್ಟುಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಸಾವಿನ ನಂತರ ಅವರ ಪತ್ನಿ ಸೋನಿಯಾಗಾಂಧಿ ಸತತ 18 ವರ್ಷ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಯುಪಿಎ1 ಮತ್ತು ಯುಪಿಎ 2ರಅಧಿಕಾರದ ಅವಧಿಯಲ್ಲಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ದೇಶದ ಉನ್ನತ್ತಿಗಾಗಿ ದುಡಿದರು.

ಇಂದು ಸಹ ಎಐಸಿಸಿಯ ಹಂಗಾಮಿಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಮೂಲಕ ದೇಶದಬಗ್ಗೆ ವಿಶ್ವವೇ ಪ್ರಶಂಸೆ ವ್ಯಕ್ತಪಡಿಸುವಂತಹ ರೀತಿಯಲ್ಲಿಆಡಳಿತ ನಡೆಸಿದರು. ಬಿಜೆಪಿ ಮುಖಂಡರೇ ಮೌನಿಪ್ರಧಾನಿ ಎಂದು ಟೀಕೆಗೆ ಒಳಗಾಗಿದ್ದ ಮನಮೋಹನ್‌ಸಿಂಗ್‌ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಜೀವ ಉಳಿಸುವ ಕೆಲಸವಾಗಲಿ: ಎಐಸಿಸಿ ಪ್ರಧಾನಕಾರ್ಯದರ್ಶಿ ಸಜೇìವಾಲ ಅವರು ರಾಜ್ಯದ ಎಲ್ಲಜಿಲ್ಲಾ ಅಧ್ಯಕ್ಷರ ಜೊತೆಗೆ, ಶಾಸಕರು, ಮಾಜಿ ಶಾಸಕರು,ಮಾಜಿ ಮಂತ್ರಿಗಳ ಜೊತೆ ಜೂಮ್‌ ಮೀಟಿಂಗ್‌ ನಡೆಸಿ,ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಸಂಕಷ್ಟಕ್ಕೆಒಳಗಾಗಿರುವ ಜನರಿಗೆ ಮಾಡುವಂತೆ ಸೂಚನೆನೀಡಿದ್ದಾರೆ. ಅವರ ಸಲಹೆಯಂತೆ ನಾವು ನಮ್ಮ ಕೈಲಾದಷ್ಟು ಜನರಿಗೆ ದಿನಸಿ ಕಿಟ್‌, ಔಷಧ ಕಿಟ್‌ ಹಾಗೂಅಗತ್ಯ ಸಲಕರಣೆ ನೀಡುವ ಮೂಲಕ ಜನಸಮಾನ್ಯರಸಂಕಷ್ಟಗಳಿಗೆ ಸ್ಪಂದಿಸಿ, ಅವರ ಜೀವ ಉಳಿಸುವ ಕೆಲಸಮಾಡಬೇಕಾಗಿದೆ ಎಂದು ತಿಳಿಸಿದರು.

ಕೃತಜ್ಞತೆ ಸಲ್ಲಿಕೆ: ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ವಿಭಾಗದಅಧ್ಯಕ್ಷ ಜಿ.ಅಬ್ದುಲ್‌ ರಹೀಂ ಮತ್ತು ಕೆಪಿಸಿಸಿ ಕಾರ್ಮಿಕವಿಭಾಗದ ರಾಜ್ಯ ಕಾಯದರ್ಶಿ ವಿ.ಎಸ್‌.ಸೈಯದ್‌ದಾದಾಪೀರ್‌ ಅವರು, ತುಮಕೂರು ಜಿಲ್ಲಾ ಕಾಂಗ್ರೆಸ್‌ವತಿಯಿಂದ ತೆರೆದಿರುವ ಕೋವಿಡ್‌ ಸಹಾಯವಾಣಿಯಿಂದ ಇದುವರೆಗೆ ಕೈಗೊಂಡಿರುವ ಕಾರ್ಯಕ್ರಮಗಳವಿವರವನ್ನು ಡಾ.ಜಿ.ಪರಮೇಶ್ವರ್‌ಗೆ ಸಲ್ಲಿಸಿ,ಸಹಾಯವಾಣಿಗೆ ಸ್ಪಂದಿಸಿ, ಬೆಡ್‌ ವ್ಯವಸ್ಥೆ ಮಾಡಿದಸಿದ್ದಾರ್ಥ ಸಂಸ್ಥೆಗೂ ಕೃತಜ್ಞತೆ ಸಲ್ಲಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಮಾಜಿಶಾಸಕ ಎಸ್‌.ಷಪಿ ಅಹಮದ್‌, ಡಾ.ಎಸ್‌.ರಫೀಕ್‌ಅಹಮದ್‌, ಮುಖಂಡ ಎಚ್‌.ಸಿ.ಹನುಮಂತಯ್ಯ,ಚಂದ್ರಶೇಖರ ಗೌಡ, ರೇವಣ್ಣಸಿದ್ದಯ್ಯ, ಸಂಜೀವ್‌ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆಟೋರಾಜು,ಮೆಹಬೂಬ್‌ ಪಾಷ, ಪಾಲಿಕೆ ಸದಸ್ಯ ಟಿ.ಎಂ.ಮಹೇಶ್‌, ಒಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು,ಮಹಿಳಾ ಘಟಕದ ನಾಗಮಣಿ, ಎಸ್‌ಸಿ ಘಟಕದಗೂಳರಿವೆ ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next