Advertisement

ಭಜಂತ್ರಿ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಿ

07:34 PM Aug 13, 2022 | Team Udayavani |

ಲಿಂಗಸುಗೂರು: ಭಜಂತ್ರಿ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕವಾಗಿ ಪ್ರಗತಿಗೆ ಪ್ರಯತ್ನ ಪಡೆಯಬೇಕು ಎಂದು ಹಟ್ಟಿ ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್‌ ಹೇಳಿದರು.

Advertisement

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಶರಣ ನೂಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರಲ್ಲಿ ಒಬ್ಬರಾದ ನೂಲಿಯ ಚಂದಯ್ಯ ಜಯಂತಿಯನ್ನು ಸರ್ಕಾರದಿಂದಲೇ ಇದೇ ಪ್ರಥಮ ಬಾರಿಗೆ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ, ಉಪತಹಶೀಲ್ದಾರ್‌ ಬಸವರಾಜ ಝಳಕಿಮಠ, ತಾಪಂ ಇಒ ಅಮರೇಶ, ಉಪನ್ಯಾಸಕ ಮರಿಯಪ್ಪ ತುರಡಗಿ, ಸಿಡಿಪಿಒ ಶರಣಮ್ಮ ಕಾರನೂರು, ಬಿಇಒ ಹುಂಬಣ್ಣ ರಾಠೊಡ್‌, ಜಿಪಂ ಎಇಇ ಶಿವಕುಮಾರ, ಪಶುಪತಿ, ಯೋಗಪ್ಪ ಭಜಂತ್ರಿ, ಮಹ್ಮದ್‌ ಹುಸೇನ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next