Advertisement

ಯುಪಿ ಮಾದರಿ ಜಾರಿಗೆ ಮೋದಿ-ಶಾ ಸಲಹೆ ನೀಡಲಿ: ಕೆ.ಎಸ್‌.ಈಶ್ವರಪ್ಪ

08:20 PM Aug 02, 2022 | Team Udayavani |

ಶಿವಮೊಗ್ಗ: ನಾವೆಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯನ್ನು ತಡೆಗಟ್ಟಲು ಸಾಧ್ಯ. ಸರ್ಕಾರ ಸಮರ್ಪಕವಾಗಿ ಕೆಲಸ ಮಾಡಿದೆ. 24 ತಾಸಿನಲ್ಲೇ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಹೀಗಿರುವಾಗ ನಾವು ಯಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು? ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಪ್ರದೇಶ ಮಾದರಿಯನ್ನು ಇಲ್ಲಿ ಅನುಸರಿಸಬೇಕೆಂಬುದು ಹಿಂದೂ ಕಾರ್ಯಕರ್ತರ ಬೇಡಿಕೆ. ಉತ್ತರ ಪ್ರದೇಶದಂತೆ ಇಲ್ಲಿಯೂ ಎನ್‌ಕೌಂಟರ್‌, ಬುಲ್ಡೋಜರ್‌ ಬಳಸಬೇಕೇ ಎಂಬುದನ್ನು ಎಲ್ಲರೂ ಕುಳಿತು ಚರ್ಚಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಇದರ ಬಗ್ಗೆ ಸಲಹೆ ನೀಡಬೇಕು ಎಂದರು.

ಹತ್ಯೆಗಳು ನಡೆಯಬಾರದು ಎಂಬುದು ನಮ್ಮ ಆಶಯ. ಆದರೆ ಹುಡುಕಿ ಹುಡುಕಿ ಹಿಂದೂ ಸಂಘಟನೆ ಕಾರ್ಯಕರ್ತರನ್ನೇ ಹತ್ಯೆ ಮಾಡಲಾಗುತ್ತಿದೆ. ಎಲ್ಲೋ ತರಬೇತಿ ಪಡೆದು ಬರುವ ಮತಾಂಧರು ಇಲ್ಲಿ ಹತ್ಯೆ ಮಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next