Advertisement

25ವರ್ಷ ಜೈಲುಶಿಕ್ಷೆ ಪೂರ್ಣಗೊಳಿಸಿ; ಯಾದವ್ ಪೆರೋಲ್ ಅರ್ಜಿ ವಜಾಗೊಳಿಸಿದ ಸುಪ್ರೀಂ

09:46 AM Nov 05, 2019 | Nagendra Trasi |

ನವದೆಹಲಿ: 2002ರ ನಿತೀಶ್ ಕಠಾರ ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ ವಿಕಾಸ್ ಯಾದವ್ ಸಲ್ಲಿಸಿರುವ ಪೆರೋಲ್ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದ್ದು, ಮೊದಲು 25 ವರ್ಷ ಜೈಲುಶಿಕ್ಷೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದೆ.

Advertisement

ಉತ್ತರ ಪ್ರದೇಶದ ರಾಜಕಾರಣಿ ಡಿಪಿ ಯಾದವ್ ಪುತ್ರ ವಿಕಾಸ್ ಯಾದವ್, ತನ್ನ ಸಹೋದರಿ ಭಾರ್ತಿ ಯಾದವ್ ಜತೆ ಸಂಬಂಧ ಹೊಂದಿದ್ದ ಆರೋಪದಲ್ಲಿ ನಿತೀಶ್ ಕಠಾರ ನನ್ನು ಹತ್ಯೆಗೈದಿದ್ದ. ಈ ಪ್ರಕರಣದಲ್ಲಿ ಸಂಬಂಧಿ ವಿಶಾಲ್ ಯಾದವ್ ಕೂಡಾ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ.

ತನ್ನ ಕಕ್ಷಿದಾರ ವಿಕಾಸ್ ಯಾದವ್ ಸುಮಾರು ಹದಿನೇಳು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದಾರೆ. ಹೀಗಾಗಿ ಪೆರೋಲ್ ಮೇಲೆ ಹೊರ ಹೋಗುವುದು ಅವರ ಮೂಲಭೂತ ಹಕ್ಕಾಗಿದೆ ಎಂದು ವಕೀಲರು ವಾದ ಮಂಡಿಸಿದ್ದರು. ನೀವು ದೋಷಿಯಾಗಿದ್ದೀರಿ..ಇದರಲ್ಲಿ ಮೂಲಭೂತ ಹಕ್ಕಿನ ಪ್ರಶ್ನೆ ಎಲ್ಲಿ ಬರುತ್ತದೆ ಎಂದು ಸುಪ್ರೀಂಕೋರ್ಟ್ ಯಾದವ್ ಪರ ವಕೀಲರಿಗೆ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next