Advertisement

ಪರಿಸರ ಜಾಗೃತಿ ಪ್ರತಿಯೊಬ್ಬರಲ್ಲಿರಲಿ

06:36 AM Jun 15, 2020 | Suhan S |

ಬಾಗಲಕೋಟೆ: ನಾವು ಪರಿಸರವನ್ನು ಸರಿಯಾಗಿ ಕಾಪಾಡಿಕೊಳ್ಳದ ಕಾರಣ, ಮುಖಕ್ಕೆ ಮಾಸ್ಕ್ ಧರಿಸಿಕೊಂಡು ನಡೆದಾಡುವ ಪ್ರಸಂಗ ಬಂದಿದೆ. ಗಿಡ-ಮರ ಬೆಳೆಸಿ ಪೋಷಿಸಬೇಕಾಗಿದೆ. ಪರಿಸರ ಜಾಗೃತಿ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಪರಿಸರ ನಾಶವಾದರೆ ಮನುಕುಲದ ನಾಶ ಖಂಡಿತ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ದೀಪಾ ಹೇಳಿದರು.

Advertisement

ತಾಲೂಕಿನ ರಾಂಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಶ್ರೀ ಸಿದ್ದೇಶ್ವರ ಪಬ್ಲಿಕ್‌ ಸ್ಕೂಲ್‌ ಆಶ್ರಯದಲ್ಲಿ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪ್ರಕೃತಿ ವಿಕೋಪಕ್ಕೆ ಕಾರಣ ನಾವುಗಳು ಪರಿಸರ ನಾಶ ಮಾಡುತ್ತಿರುವುದು. ಮನುಕುಲ ಉತ್ಸಾಹದಿಂದ ಉಳಿಯಬೇಕಾದರೆ ಪರಿಸರ ರಕ್ಷಿಸಬೇಕಾಗಿದೆ. ಅರಣ್ಯ ಸಂಪತ್ತು, ನೈಸರ್ಗಿಕ ಸಂಪತ್ತು ನಾಶವಾಗಿರುವುದರಿಂದ ಜೀವ ಸಂಕುಲಕ್ಕೆ ವಿಪತ್ತು ಎದುರಾಗಿದೆ ಎಂದು ಹೇಳಿದರು. ಈ ವೇಳೆ ಸಿದ್ದೇಶ್ವರ ಪಬ್ಲಿಕ್‌ ಸ್ಕೂಲ್‌ ಅಧ್ಯಕ್ಷ ಪ್ರಕಾಶ ಮಂಕಣಿ, ಗ್ರಾಮದ ಮುಖಂಡ ಗುರು ತುಂಬರಮಟ್ಟಿ, ಯೋಜನಾ ಸೇವಾ ಪ್ರತಿನಿಧಿ ಶೃತಿ ಶಿವಲೀಲಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next