Advertisement

“ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿ’

11:22 AM Mar 23, 2022 | Team Udayavani |

ಅಫಜಲಪುರ: ಕಾಂಗ್ರೆಸ್‌ ಪಕ್ಷ ಡಿಜಿಟಲ್‌ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಫಜಲಪುರ ಮತಕ್ಷೇತ್ರದಿಂದ 25 ಸಾವಿರ ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಪಂ ಮಾಜಿ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ ಹೇಳಿದರು.

Advertisement

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಡಿಜಿಟಲ್‌ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಒಟ್ಟು 250 ಬೂತ್‌ಗಳಿವೆ. ಇದರಲ್ಲಿ ಪ್ರತಿ ಬೂತ್‌ದಿಂದ 200 ಜನರನ್ನು ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಮಾಡಲಾಗುತ್ತಿದೆ. ಕಾಂಗ್ರೆಸ್‌ ಪಕ್ಷ ಆಂದೋಲನದ ಮೂಲಕ ಹುಟ್ಟಿರುವ ಪಕ್ಷವಾಗಿದೆ. ಸಮಾಜದಲ್ಲಿನ ಕಟ್ಟಕಡೆ ವ್ಯಕ್ತಿಯೂ ಸ್ವಾಭಿಮಾನದಿಂದ ಜೀವನ ಸಾಗಿಸಲು ಕಾಂಗ್ರೆಸ್‌ ಪಕ್ಷ ಶ್ರಮಿಸಿದೆ. ಎಲ್ಲ ವರ್ಗದ ಜನರನ್ನು ತೆಗೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್‌ ಆಗಿದೆ ಎಂದು ಹೇಳಿದರು.

ಮುಖಂಡರಾದ ರಾಜಶೇಖರ ಪಾಟೀಲ, ಶರಣು ಕುಂಬಾರ, ಅಂಬರೀಶ್‌ ಬುರಲಿ, ಶ್ರೀಧರ್‌ ರಾಠೊಡ, ಮಾಜೀದ್‌ ಪಟೇಲ್‌, ಮಳೇಂದ್ರ ಡಾಂಗೆ, ವಿರೇಂದ್ರ ಮ್ಯಾಳೇಸಿ, ಪ್ರವೀಣ ಕಲ್ಲೂರ, ನಾಗರಾಜ ರಾಂಪೂರ, ಸಂಗಮೇಶ ಅಂಜುಟಗಿ, ಪ್ರೀತಂ ಚವ್ಹಾಣ, ಸಿದ್ಧು ಚವಡಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next