Advertisement

ಜಾತಿರಹಿತ ಸಮಾಜ ನಿರ್ಮಾಣ ಆದ್ಯತೆಯಾಗಲಿ

04:57 PM Aug 19, 2019 | Team Udayavani |

ತುಮಕೂರು: ಎಲ್ಲಾ ಸಮಾಜ ಒಳಗೊಂಡ ಜಾತಿರಹಿತ ಸಮಾಜ ನಿರ್ಮಾಣದ ಕನಸು ಕಂಡವರು ಬಸವಣ್ಣ. ಅವರ ಅನುಯಾಯಿಗಳಾದ ನಾವು ಜಾತಿಗೆ ಸೀಮಿತವಾಗದೆ ಎಲ್ಲಾ ಜಾತಿಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ಜಿ.ಸಿ. ಮಾಧುಸ್ವಾಮಿ ಸಲಹೆ ನೀಡಿದರು.

Advertisement

ನಗರದ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ವೀರಶೈವ-ಲಿಂಗಾಯತ ನೌಕರರ ಒಕ್ಕೂಟದಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತರೆ ಸಮುದಾಯ ಏಳಿಗೆಗೂ ಕೈಲಾದ ನೆರವು ನೀಡುವ ಪರಿಪಾಠ ಪ್ರತಿಯೊಬ್ಬರೂ ಬೆಳೆಸಿಕೊಂಡರೆ ಅದೇ ನಾವು ಬಸವಣ್ಣನಿಗೆ ನೀಡುವ ಗೌರವ ಎಂದು ಹೇಳಿದರು.

ಪ್ರತಿಭೆ ಅನಾವರಣಗೊಳಿಸಿ: ವಿದ್ಯಾರ್ಥಿಗಳು ಪ್ರತಿಭೆ ಬೆಳೆಸಿಕೊಳ್ಳುವುದು ಅಗತ್ಯ. ಕೇವಲ ಅಂಕಗಳಿಕೆಗೆ ಸೀಮಿತವಾಗಬಾರದು. ಪುಸ್ತಕ ಹೆಚ್ಚು ಓದುವ ಮೂಲಕ ವಿಚಾರ ತಿಳಿದುಕೊಳ್ಳಬೇಕು. ಸ್ಪರ್ಧಾ

Advertisement

Udayavani is now on Telegram. Click here to join our channel and stay updated with the latest news.

Next