Advertisement

Sirsi: ನಾಲ್ಕು ವರ್ಷ ಮಲಗೆದ್ದವರಿಗೇ ಬಿಜೆಪಿ‌ ಟಿಕೆಟ್ ಕೊಡಲಿ: ಮಧು ಬಂಗಾರಪ್ಪ

11:48 AM Jan 20, 2024 | Team Udayavani |

ಶಿರಸಿ: ನಾಲ್ಕು ವರ್ಷ ಮಲಗೆದ್ದ ಸಂಸದ ಅನಂತ ಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ಕೊಡಲಿ. ನಾವೂ ಅವರ ವಿರುದ್ಧ ಪ್ರಚಾರಕ್ಕೆ ಬರಲಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದರು.

Advertisement

ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತಲೆ‌ ಕೆಟ್ಟವರ ಬಗ್ಗೆ ಹೇಳಲು ನನಗೆ ತಲೆ ಕೆಟ್ಟಿಲ್ಲ.‌ ಅದು ಹುಚ್ಚರ ಸಹವಾಸ. ಜನರಿಂದ ಮತ ತಗೊಂಡು ನಾಲ್ಕು ವರ್ಷ ಮನೆಯಲ್ಲಿ ಮಲಗಿದ್ದವರು ಇಡೀ ದೇಶದಲ್ಲಿ ಯಾರೂ ಇಲ್ಲ. ಅಂಥವರಲ್ಲಿ ಇವರೊಬ್ಬರೇ ಪ್ರಪ್ರಥಮ. ಅಂಥವರಿಗೆ  ದಿಕ್ಕಾರ ಮಾಡಲೇಬೇಕು ಎಂದರು.

ಪ್ರಜಾ ಪ್ರಭುತ್ವದಲ್ಲಿ ನಾವೂ ಸೋತಿದ್ದೇವೆ. ಆದರೆ, ಮಾನ‌ ಮರ್ಯಾದೆ ಬಿಟ್ಟು ಮಾತಾಡಬಾರದು. ಸಂಸ್ಕೃತಿ ಇಲ್ಲದವರು. ಮಾನ ಇಲ್ಲದ ವ್ಯಕ್ತಿ .ಇನ್ನೇನು ಇದೆಯೋ ನೋಡಿ ನೀವೇ. ಮನುಷ್ಯನೇ ಅಲ್ಲ ಎಂದ ಅವರು ಯಾರೇ ಆದರೂ ಕಾನೂನು ಪ್ರಕಾರ ಕಾನೂನೇ ಗೆಲ್ಲಬೇಕು ಎಂದೂ ಹೇಳಿದರು.

ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next