Advertisement

ICC: ಆರ್ಥರ್‌ ತಮ್ಮ ಹೇಳಿಕೆಯನ್ನು ಸಮರ್ಥಿಸಲಿ

12:01 AM Oct 18, 2023 | Team Udayavani |

ದುಬಾೖ: ಭಾರತ- ಪಾಕಿಸ್ಥಾನ ನಡುವಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ಕುರಿತು ಪಾಕ್‌ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್‌ ನೀಡಿದ ಹೇಳಿಕೆಯನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಲಿ, ಇಲ್ಲವೇ ಪರಾಮರ್ಶಿಸಲಿ ಎಂದು ಸವಾಲೊಡ್ಡಿದೆ. ಇದಕ್ಕೆ ವಿಫ‌ಲರಾದರೆ ಆರ್ಥರ್‌ ದಂಡನೆಗೆ ಒಳಗಾಗುವ ಸಾಧ್ಯತೆ ಇದೆ.

Advertisement

ಭಾರತ-ಪಾಕಿಸ್ಥಾನ ಪಂದ್ಯದ ಕುರಿತು ಪ್ರತಿಕ್ರಿಯಿಸಿದ್ದ ಮಿಕ್ಕಿ ಆರ್ಥರ್‌, “ಇದು ಐಸಿಸಿ ಪಂದ್ಯಾವಳಿಯಂತೆ ಕಾಣಲಿಲ್ಲ, ಬಿಸಿಸಿಐ ಆಯೋಜಿಸಿದ ದ್ವಿಪಕ್ಷೀಯ ಸರಣಿಯಂತಿತ್ತು. ಎಲ್ಲವೂ ಬಿಸಿಸಿಐ ಕಾರ್ಯಕ್ರಮದಂತೆ ಗೋಚರವಾಯಿತು” ಎಂದಿದ್ದರು.

ಮಿಕ್ಕಿ ಆರ್ಥರ್‌ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಐಸಿಸಿ ಮುಖ್ಯಸ್ಥ ಗ್ರೆಗ್‌ ಬಾರ್ಕ್ಲೇ , “ಪ್ರತಿಯೊಂದು ಐಸಿಸಿ ಪಂದ್ಯಾವಳಿಯ ವೇಳೆಯೂ ನಾವು ಟೀಕೆಗಳನ್ನು ಎದುರಿಸುವುದು ಮಾಮೂಲು. ಬೇರೆ ಬೇರೆ ಕಡೆಗಳಿಂದ ಬೇರೆ ಬೇರೆ ರೀತಿಯ ಟೀಕೆಗಳು ಎದುರಾಗುತ್ತವೆ. ಇಂಥ ಟೀಕೆಗಳು ಮೌಲ್ಯಯುತವಾದರೆ ನಾವು ಖಂಡಿತ ಸ್ವೀಕರಿಸುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪನ್ನು ಸರಿಪಡಿಸಲು ಮುಂದಾಗುತ್ತೇವೆ. ಇದು ಪಂದ್ಯಾವಳಿಯ ಆರಂಭವಷ್ಟೇ. ಇಲ್ಲಿ ಆರ್ಥರ್‌ ತಮ್ಮ ಹೇಳಿಕೆಯನ್ನು ಸಮರ್ಥಿಸಬಹುದು…’ ಎಂದು ಸಣ್ಣದೊಂದು ಎಚ್ಚರಿಕೆ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next