Advertisement

ಕೃಷ್ಣಾ ತೀರದಲ್ಲಿ ಮತ್ತೆ ಚಿರತೆ ಕಾಟ: ಮೇಕೆ ಹೊತ್ತು ಕಬ್ಬಿನ‌ ಗದ್ದೆಯಲ್ಲಿ ಮರೆಯಾದ ಚಿರತೆ

12:51 PM Aug 01, 2022 | keerthan |

ವಿಜಯಪುರ: ಕೃಷ್ಣಾ ನದಿ ತಟದಲ್ಲಿ ಮತ್ತೆ ಚಿರತೆ ಹಾವಳಿ ಆರಂಭಗೊಂಡಿದೆ. ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಗ್ರಾಮದ ಬಳಿ ಕಬ್ಬಿನ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದೆ.

Advertisement

ದೇವರಗೆಣ್ಣೂರ ಗ್ರಾಮದ ರೈತರ ಜಮೀನಿನಲ್ಲಿದ್ದ ಮೇಕೆಯನ್ನು ಹೊತ್ತೊಯ್ದ ಚಿರತೆ ಕಬ್ಬಿನ ಗದ್ದೆಯಲ್ಲಿ ಮರೆಯಾಗಿದೆ.

ಇದನ್ನೂ ಓದಿ:ಪ್ರಕರಣ ಬೇಧಿಸಲು ಜನರ ಸಹಕಾರ ಅತ್ಯಗತ್ಯ: ಡಿಜಿಪಿ ಪ್ರವೀಣ್ ಸೂದ್

ಚಿರತೆ ಪ್ರತ್ಯಕ್ಷ ಆಗಿರುವುದರಿಂದ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ, ಬಬಲಾದಿ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ರೈತರು, ಕೃಷಿ ಕಾರ್ಮಿಕರು ಜಮೀನಿಗೆ ಹೋಗಲು ಭಯ ಪಡುತ್ತಿದ್ದಾರೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next