Advertisement

ಮಧ್ಯಪ್ರದೇಶ ಗ್ರಾಮಗಳಲ್ಲಿ ಚಿರತೆ ದಾಳಿ: ಮೂರು ಮಕ್ಕಳು ಬಲಿ

03:30 PM Jan 10, 2018 | Team Udayavani |

ಛಿಂದ್ವಾರಾ, ಮಧ್ಯಪ್ರದೇಶ : ಛಿಂದ್ವಾರಾ ಜಿಲ್ಲೆಯ ಪ್ರತ್ಯೇಕ ಗ್ರಾಮಗಳಲ್ಲಿ ಚಿರತೆಯೊಂದು ಮೂವರು ಮಕ್ಕಳನ್ನು ಕೊಂದಿದ್ದು ಅವರಲ್ಲಿ ಒಬ್ಬ ಬಾಲಕನನ್ನು ತಿಂದು ಮುಗಿಸಿದೆ.

Advertisement

ಅರಣ್ಯ ಪ್ರದೇಶಕ್ಕೆ  ತಾಗಿಕೊಂಡಿರುವ ಈ ಗ್ರಾಮಗಳಲ್ಲಿ  ಕಳೆದ ಮೂರು ದಿನಗಳಲ್ಲಿ  ಚಿರತೆಯ ದಾಳಿ ವಿಪರೀತವಾಗಿತ್ತು. ಗ್ರಾಮಸ್ಥರು ಭಯಭೀತರಾಗಿದ್ದರು.

ನಿನ್ನೆ ಮಂಗಳವಾರ ರಾತ್ರಿ ಝೀರ್‌ಪಾನಿ ಗ್ರಾಮದಲ್ಲಿ ಚಿರತೆಯು 12 ವರ್ಷದ ಬಾಲಕನನ್ನು ಕೊಂದು ಆತನ ಅರ್ಧ ದೇಹವನ್ನು ತಿಂದು ಮುಗಿಸಿತು ಎಂದು ವಿಭಾಗೀಯ ಅರಣ್ಯಾಧಿಕಾರಿ ಎಸ್‌ ಎಸ್‌ ಉಡ್ಡೆ ತಿಳಿಸಿದ್ದಾರೆ. 

ಭಾನುವಾರ ಈ ಚಿರತೆಯು ಮೂರು ವರ್ಷ ಪ್ರಾಯದ ಬಾಲಕಿಯನ್ನು ಹಾಗೂ 10 ವರ್ಷದ ಬಾಲಕನನ್ನು ಕೊಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next