Advertisement

ಇನ್ನಾ ಗ್ರಾಮದಲ್ಲಿ ಚಿರತೆ : ಆತಂಕದಲ್ಲಿ ಜನತೆ

01:28 AM May 16, 2019 | sudhir |

ಕಾರ್ಕಳ: ತಾಲೂಕಿನ ಇನ್ನಾ ಗ್ರಾಮದಲ್ಲಿ ಚಿರತೆ ಕಾಣಸಿಗುತ್ತಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

Advertisement

ಮೇ 13ರಂದು ಇಲ್ಲಿನ ಕೇದಿಗೆ ನಿವಾಸಿಗಳಾದ ಸುರೇಶ್‌ ಹಾಗೂ ಸತೀಶ್‌ ಎಂಬವರ ಕೊಟ್ಟಿಗೆಯಲ್ಲಿದ್ದ ಕರುಗಳನ್ನು ಚಿರತೆಯೊಂದು ಕೊಂದು ಹಾಕಿದೆ. ಈ ಕುರಿತು ಅರಣ್ಯ ರಕ್ಷಕ ರಾಜು ಹಾಗೂ ಕಾರ್ಕಳ ಪಶಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ| ಎಚ್‌. ಸುಬ್ರಹ್ಮಣ್ಯ ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಚಿರತೆಯ ಹಾವಳಿಯಿಂದ ಗ್ರಾಮದ ಜನತೆ ಭಯಭೀತಗೊಂಡಿದ್ದು, ರಾತ್ರಿ ವೇಳೆ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next