ಶ್ರೀರಂಗಪಟ್ಟಣ : ಪ್ರಸಿದ್ದ ಕೆಆರ್ ಎಸ್ ಬೃಂದಾವನದಲ್ಲಿ ಚಿರತೆಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಉತ್ತರ ಬೃಂದಾವನದಲ್ಲಿ ತೋಟದಲ್ಲಿ ಚಿರತೆ ಕಂಡುಬಂದಿದೆ ಆ ಹಿನ್ನಲೆಯಲ್ಲಿ, ಉತ್ತರ ಬೃಂದಾವನಕ್ಕೆ ತೆರಳಿದ್ದ ಪ್ರವಾಸಿಗರನ್ನು ಕೆ.ಎಸ್.ಐ.ಎಫ್ ಪೊಲೀಸ್ ಸಿಬ್ಬಂದಿಗಳು ವಾಪಸ್ಸು ಕಳುಹಿಸಿ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕ ನಿರ್ಭಂದಿಸಿದೆ.
ಗಸ್ತಿನಲ್ಲಿದ್ದ ಪೊಲೀಸರಿಗೆ ಚಿರತೆ ಕಂಡು ಬಂದಿದೆ, ಈ ವೇಳೆ ಅರಣ್ಯ ಇಲಾಖೆಗೆ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ , ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಪ್ರವಾಸಿಗರ ರಕ್ಷಣೆಗೆ ಮುಂದಾಗಿದ್ದು, ಚಿರತೆ ಹಿಡಿಯುವ ಪ್ರಯತ್ನದಲ್ಲಿದ್ದಾರೆ.
ಇದನ್ನೂ ಓದಿ : ಉಕ್ರೇನ್ʼನಲ್ಲಿ ಸಿಲುಕಿರುವ ಕನ್ನಡಿಗರನ್ನು ಏರ್ಲಿಫ್ಟ್ ಮಾಡಿ : ಸರಕಾರಕ್ಕೆ HDK ಮನವಿ