Advertisement

ದಾವಣಗೆರೆ: ಲಿಂಗದಳ್ಳಿ ಗ್ರಾಮದಲ್ಲಿ ರಾತ್ರಿ ಹೊತ್ತು ಚಿರತೆ ಸಂಚಾರ…ಜನರಲ್ಲಿ ಆತಂಕ

08:28 PM Dec 20, 2022 | Team Udayavani |

ದಾವಣಗೆರೆ: ಚನ್ನಗಿರಿ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿದೆ.

Advertisement

ಗ್ರಾಮದ ಲೋಕೇಶನಾಯ್ಕ ಎಂಬುವರ ಮನೆಯಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಚಿರತೆ ಬಂದು ಹೋದ ದೃಶ್ಯ ಸೆರೆಯಾಗಿದೆ.

ಅನೇಕ ದಿನಗಳಿಂದ ಗ್ರಾಮದಲ್ಲಿ ನಾಯಿ ನಾಪತ್ತೆಯಾಗುತ್ತಿದ್ದು, ಚಿರತೆ ದಾಳಿಯಾಗಿದೆ ಎಂದು ಅನುಮಾನ ಇತ್ತು. ಈಗ ಚಿರತೆ ಕಾಣಿಸಿಕೊಂಡಿದ್ದು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಏನಾದರೂ ಅನಾಹುತ ನಡೆಯುವ ಮೊದಲು ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹಾಲು ಕೊಡದ ಆಕಳು ಕೊಟ್ಟು ಕಲಬುರ್ಗಿ ರೈತರಿಗೆ ಮೋಸ ಮಾಡಿದರಾ ಸವಿತಾನಂದ ಶ್ರೀ!

Advertisement
Advertisement

Udayavani is now on Telegram. Click here to join our channel and stay updated with the latest news.

Next