Advertisement

ಕಲಬುರಗಿ ಜಿಲ್ಲೆಯಲ್ಲಿ ಚಿರತೆ ಭಯ: ಮೂರು ಹಸುಗಳ ಕೊಂದ ವ್ಯಾಘ್ರ

03:28 PM Mar 20, 2020 | Suhan S |

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಮೂರು ಗ್ರಾಮಗಳಲ್ಲಿ ಜನರಿಗೆ ಚಿರತೆ ಭಯ ಕಾಡುತ್ತಿದೆ.‌ ಕಳೆದ ಮೂರು ದಿನಗಳಿಂದ ಚಿರತೆ ಸುತ್ತಾಡುತ್ತಿದ್ದು, ಮೂರು ಹಸುಗಳ ಮೇಲೆ ದಾಳಿ ಮಾಡಿ‌ ಕೊಂದು ಹಾಕಿದೆ.

Advertisement

ಜೇವರ್ಗಿ ತಾಲೂಕಿನ ಹಂಚನಾಳ ಎಸ್.ಎನ್. ಗ್ರಾಮ, ಅಂಕಲಗಾ, ಬೋಸಗಾ ಬಿ. ಗ್ರಾಮದಲ್ಲಿ ಚಿರತೆ ದಾಳಿ‌ ಮಾಡಿದೆ. ಇದರಿಂದ ಈ ಮೂರು ಗ್ರಾಮಗಳ ಜನರು ಆತಂಕಗೊಂಡಿದ್ದಾರೆ. ಚಿರತೆ ದಾಳ ವಿಷಯದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ, ಪರಿಶೀಲನೆ ನಡೆಸಿದರು. ಹೆಜ್ಜೆ ಗುರುತು ಮೇಲೆ ಚಿರತೆಯೇ ಬಂದಿರುವ ಅನುಮಾನ ವ್ಯಕ್ತವಾಗಿದೆ.

ಭಯದಲ್ಲಿರುವ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next