Advertisement

ಅರಣ್ಯ ಇಲಾಖೆ ಕ್ಯಾಂಪಸ್‌ನಲ್ಲಿ ಚಿರತೆ ಡೇ ಔಟ್‌

07:49 PM Dec 27, 2022 | Team Udayavani |

ಜೋರ್ಹತ್‌: ಇತ್ತೀಚೆಗಷ್ಟೇ ಬೆಂಗಳೂರು, ಮೈಸೂರುಗಳಲ್ಲಿ ಚಿರತೆ ಅರಣ್ಯದ ಅಂಚಿನಲ್ಲಿರುವ ಪ್ರದೇಶಗಳಿಗೆ ನುಗ್ಗಿ ಭೀತಿ ಉಂಟು ಮಾಡಿತ್ತು. ಅದೇ ಪರಿಸ್ಥಿತಿ ಅಸ್ಸಾಂ ಜೋರ್ಹತ್‌ನ ಅರಣ್ಯ ಸಂಶೋಧನಾ ಸಂಸ್ಥೆ (ಆರ್‌ಎಫ್ಆರ್‌ಐ)ಯ ಕ್ಯಾಂಪಸ್‌ನಲ್ಲಿ ಉಂಟಾಗಿದೆ.

Advertisement

ಅಲ್ಲಿಗೆ ಚಿರತೆ ನುಗ್ಗಿ ದಾಂಧಲೆ ನಡೆಸಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳ ಮೇಲೆ ಹಾರಿ, ಅವುಗಳ ಗಾಜು ಒಡೆಯಲು ಮುಂದಾಗಿದೆ. ಜತೆಗೆ ಮೂವರು ಅರಣ್ಯ ಅಧಿಕಾರಿಗಳು ಸೇರಿ ಕನಿಷ್ಠ 15 ಮಂದಿಯನ್ನು ಗಾಯಗೊಳಿಸಿದೆ.

ಜೋರ್ಹತ್‌ನ ಹೊರವಲಯದಲ್ಲಿ ಆರ್‌ಎಫ್ಆರ್‌ಐ ಕ್ಯಾಂಪಸ್‌ ಇದ್ದು, ಸುತ್ತಲೂ ಅರಣ್ಯದಿಂದ ಕೂಡಿದೆ.

ಸೋಮವಾರ ಕ್ಯಾಂಪಸ್‌ಗೆ ನುಗ್ಗಿದ ಚಿರತೆ, ಮಹಿಳೆಯರು, ಮಕ್ಕಳು ಸೇರಿದಂತೆ ಅಲ್ಲಿನ ನಿವಾಸಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಅದರ ವಿಡಿಯೋ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next