Advertisement

ಪಳ್ಳಿ : ಅಪರಿಚಿತರ ಉರುಳಿಗೆ ಬಿದ್ದ ಚಿರತೆ

12:50 PM Jan 20, 2020 | Suhan S |

ಪಳ್ಳಿ : ಕಳೆದ ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ ಚಿರತೆಯೊಂದು ರವಿವಾರ ತಡ ರಾತ್ರಿ ಕಾರ್ಕಳ ತಾಲೂಕಿನ ಪಳ್ಳಿ ಪೇಟೆಯಲ್ಲಿ ಅಪರಿಚಿತರು ಇಟ್ಟಿದ್ದ ಉರುಳಿಗೆ ಬಿದ್ದಿದ್ದೆ.

Advertisement

ಎರಡು ದಿನಗಳ ಹಿಂದೆ ಕಲ್ಯಾ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ರಸ್ತೆ ಬದಿ ಅಲೆಯುತ್ತಿದ್ದ ಚಿರತೆ ಗ್ರಾಮಸ್ಥರಲ್ಲಿ ಭೀತಿಯನ್ನು ಹುಟ್ಟಿಸಿತ್ತು. ರವಿವಾರ ರಾತ್ರಿ ಅಪರಿಚಿತರು ಇಟ್ಟಿದ್ದ ಉರುಳಿನಲ್ಲಿ ಚಿರತೆ ಸಿಕ್ಕಿ ಬಿದ್ದಿದ್ದು, ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ.

ಸದ್ಯ ಉರುಳಿಗೆ ಸಿಲುಕಿರುವ ಚಿರತೆಯ ಕಾರ್ಯಚರಣೆಯಲ್ಲಿ ಅರಣ್ಯ ಅಧಿಕಾರಿಗಳು ನಿರತರಾಗಿದ್ದು, ಅರವಳಿಕೆ ನೀಡಲು ಬರುವ ವೈದ್ಯರು ಇನ್ನಷ್ಟೇ ಬರಬೇಕಿದೆ. ಅರವಳಿಕೆ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿದು ಬಂದಿದೆ.

ಬೈಲೂರು ಉಪವಲಯದ ಉಕ್ರಪ್ಪ, ಅರಣ್ಯ ಸಂರಕ್ಷಣಾಧಿಕಾರಿ ಪ್ರಸಾದ್ ಬಿ, ಶ್ರೀಧರ್, ಸಂಜೀವ್, ಹಾಗೂ ಗ್ರಾಮಸ್ಥರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next