Advertisement

ಹುಣಸೂರು: ಕೊಟ್ಟಿಗೆಗೆ ದಾಳಿ ಮಾಡಿ ಕುರಿಯನ್ನು ಕೊಂದ ಚಿರತೆ

11:41 AM Sep 24, 2020 | keerthan |

ಹುಣಸೂರು (ಮೈಸೂರು): ಚಿರತೆ ದಾಳಿ ನಡೆಸಿ ಕುರಿಯನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ನಂಜಾಪುರದಲ್ಲಿ ಕಳೆದ ರಾತ್ರಿ ನಡೆದಿದೆ.

Advertisement

ತಾಲೂಕಿನ ನಂಜಾಪುರದ ವರದರಾಜು ಎಂಬವರಿಗೆ ಸೇರಿದ ಕುರಿ ಇದಾಗಿದ್ದು, ರಾತ್ರಿ ಕೊಟ್ಟಿಗೆಯಲ್ಲಿ ಕೂಡಿದ್ದ ಕುರಿ ಮೇಲೆ ದಾಳಿ ನಡೆಸಿದ ವೇಳೆ ಕುರಿಗಳ ಚೀರಾಟ ಕೇಳಿ ಹೊರಬಂದ ಮಾಲೀಕರು ಕೂಗಾಟ ನಡೆಸಿದ ವೇಳೆ ಚಿರತೆ ಓಡಿ ಹೋಗಿದೆ.

ಗ್ರಾಮದ ಬಳಿ ಇರುವ ರೇಷ್ಮೆ ಫಾರಂ ಕುರಿಚಲು ಕಾಡಿನಿಂದ ಹೊರಬರುವ ಚಿರತೆಗಳು ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿವೆ. ಈ ಕುರುಚಲು ಕಾಡಿನಲ್ಲಿ ಹಲವು ಚಿರತೆ ಮರಿಗಳಿದ್ದು, ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 

ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ರಿಜ್ವಾನ್, ದೇವಯ್ಯ ಭೇಟಿ ನೀಡಿ ಪರಿಶೀಲಿಸಿದ್ದು, ಬೋನ್ ಇಟ್ಟು ಚಿರತೆ ಸೆರೆ ಹಿಡಿಯಲಾಗುವುದೆಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next