Advertisement

ರಾಮನಗರದಲ್ಲಿ ನರಭಕ್ಷಕ: ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಮಗುವನ್ನು ಹೊತ್ತೊಯ್ದ ಚಿರತೆ

08:30 AM May 10, 2020 | keerthan |

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕು ಕಸಬಾ ಹೋಬಳಿ ಕದರಯ್ಯನ ಪಾಳ್ಯದಲ್ಲಿ ಆಹಾರ ಅರಸಿ ಬಂದ ಚಿರತೆಯೊಂದು ಮನೆಯಲ್ಲಿ ನಿದ್ರಿಸುತ್ತಿದ್ದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ನಡೆದಿದೆ.

Advertisement

ಘಟನೆಯಲ್ಲಿ ಮೃತಪಟ್ಟ ಮಗು ಗ್ರಾಮದ ಚಂದ್ರಪ್ಪ ಎಂಬವರ 3 ವರ್ಷದ ಪುತ್ರ ಎಂದು ಗೊತ್ತಾಗಿದೆ.  ರಾತ್ರಿ ಸುಮಾರು 12.30ರ ವೇಳೆಗೆ ಬಂದ ಚಿರತೆ ಮನೆಯೊಳಗೆ ಮಲಗಿದ್ದ ಮಗುವನ್ನು ಹೊತ್ತೊಯ್ದು ಎಳೆದಾಡಿರುವ ಕಾರಣ ಮಗುವಿನ ರುಂಡ, ಮುಂಡ ಬೇರ್ಪಟ್ಟಿದೆ. ಕೈಗಳು ತುಂಡಾಗಿದೆ.  ಮಗುವನ್ನು ಹೊತ್ತೊಯ್ದ ಕೆಲವೇ ಕ್ಷಣಗಳಲ್ಲಿ ಮಗುವಿನ ಪೋಷಕರು ಬೆನ್ನು ಹತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಚಿರತೆಗೆ ಬಲಿಯಾಗಿತ್ತು ಎಂದು ತಿಳಿದುಬಂದಿದೆ.

ಮನೆಯಲ್ಲಿ ಮಲಗಿದ್ದ ಮಗುವನ್ನು ಚಿರತೆ ಹೊತ್ತೊಯ್ದಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಕೆಲವು ಗ್ರಾಮಸ್ಥರು ಇದು ಚಿರತೆಯಲ್ಲ ದೊಡ್ಡ ನಾಯಿ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ವಿರುದ್ದ ಹರಿಹಾಯ್ದಿದ್ದಾರೆ. ಶಾಸಕ ಎ.ಮಂಜು ಸಧ್ಯದಲ್ಲೆ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next