Advertisement
ಹೈದರಾಬಾದ್ ನಿವಾಸಿ ಹೃತೀಕ್ ಎಂಬ 09 ವರ್ಷದ ಬಾಲಕ ಅಪ್ಪ ಅಮ್ಮ ಜತೆ ಪ್ರವಾಸಕ್ಕೆ ಆಗಮಿಸಿ ದೇವರದರ್ಶನ ಪಡೆದ ನಂತರ ದೇಗುಲದ ಹಿಂಭಾಗದಲ್ಲಿರುವ ಗವಿಯ ಹಾವಿನ ಗೋಪುರ ವೀಕ್ಷಸಲು ತೆರಳುವಾಗ ಹಿಂದಿನಿಂದ ಬಂದ ಚಿರತೆ ಬಾಲಕನ ಮೇಲೆ ದಾಳಿ ಮಾಡಿದೆ.ಅಲ್ಲಿದ್ದ ಬಾಲಕನ ಕುಟುಂಬದವರು ಕಿರುಚಾಡಿದ್ದರಿಂದ ಉಳಿದ ಪ್ರವಾಸಿಗರು ಗಲಾಟೆ ಮಾಡಿ ಚಿರತೆಯನ್ನು ಓಡಿಸಿದ್ದಾರೆ.
Related Articles
Advertisement
ಭಯದಲ್ಲಿ ಜನತೆ: ಏಳುಗುಡ್ಡಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಸ್ಪೋಟದ ಕಾರಣದಿಂದ ಅಲ್ಲಿಯ ಕರಡಿ ಚಿರತೆಗಳು ಅಂಜನಾದ್ರಿ ಕಿಷ್ಕಿಂದಾ ಪ್ರದೇಶಕ್ಕೆ ವಲಸೆ ಬಂದಿದ್ದು ಆನೆಗೊಂದಿ ಸಾಣಾಪೂರ ಮಲ್ಲಾಪೂರ ಭಾಗದ ಬೆಟ್ಟಗುಡ್ಡಗಳ ಹತ್ತಿರ ಇರುವ ಗ್ರಾಮಗಳ ಜನತೆ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಬೋನ್ ಇಟ್ಟು ಚಿರತೆ ಕರಡಿಗಳನ್ನು ಸೆರೆ ಹಿಡಿಯುವಂತೆ ಜನರುಒತ್ತಾಯಿಸಿದ್ದಾರೆ.