Advertisement

ತರಕಾರಿ, ಬೇಳೆ-ಕಾಳುಗಳಿಗೆ ಈ ತಿಂಗಳು ಹೆಚ್ಚು ವೆಚ್ಚ :ಸಮೀಕ್ಷೆಯೊಂದರಲ್ಲಿ ದೇಶವಾಸಿಗಳ ಆತಂಕ

08:29 PM Apr 14, 2022 | Team Udayavani |

ನವದೆಹಲಿ: “ತರಕಾರಿ, ಬೇಳೆ-ಕಾಳುಗಳಿಗೆ ಮಾರ್ಚ್‌ನಲ್ಲಿ ನೀಡಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಏಪ್ರಿಲ್‌ನಲ್ಲಿ ಕೊಡುತ್ತಿದ್ದೇವೆ’ ಹೀಗೆಂದು ದೇಶವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ “ಲೋಕಲ್‌ ಸರ್ಕಲ್‌’ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ದೇಶದ 311 ಜಿಲ್ಲೆಗಳಲ್ಲಿನ 11,800 ಮಂದಿಯನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಶೇ.37 ಮಂದಿ ಮಾರ್ಚ್‌ಗಿಂತ ಹಾಲಿ ತಿಂಗಳಲ್ಲಿಯೇ ಅಗತ್ಯ ವಸ್ತುಗಳಿಗೆ ಹೆಚ್ಚಿನ ಮೊತ್ತ ವೆಚ್ಚ ಮಾಡುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಸಂಸ್ಥೆ ದೇಶದ 359 ಜಿಲ್ಲೆಗಳ 36 ಸಾವಿರ ಮಂದಿಯನ್ನು ಉಲ್ಲೇಖೀಸಿ ನಡೆದ ಮತ್ತೂಂದು ಸಮೀಕ್ಷೆಯಲ್ಲಿ ಶೇ.24ರಷ್ಟು ಮಂದಿಯ ಮನೆಗಳಲ್ಲಿ ಬೆಲೆ ಏರಿಕೆಯ ಕಾರಣದಿಂದ ಅಡುಗೆ ಎಣ್ಣೆಯ ಬಳಕೆಯನ್ನೇ ಗಣನೀಯ ಪ್ರಮಾಣದಲ್ಲಿ ತಗ್ಗಿಸಿದ್ದೇವೆ ಎಂದಿದ್ದಾರೆ. ಶೇ.29 ಮಂದಿ ಅಗ್ಗದ ದರದಲ್ಲಿ ಸಿಗುವ ಅಡುಗೆ ಎಣ್ಣೆಯನ್ನು ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಸಮೀಕ್ಷೆಯ ವೇಳೆ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಪ್ರಕಟಗೊಂಡಿರುವ ಗ್ರಾಹಕ ಆಧಾರಿತ ಹಣದುಬ್ಬರ ಮಾರ್ಚ್‌ನಲ್ಲಿ ಶೇ.7.68 ಆಗಿತ್ತು. ಹದಿನೇಳು ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಅದು ಗರಿಷ್ಠ ಪ್ರಮಾಣದ್ದಾಗಿದೆ. ಆಹಾರ ಹಣದುಬ್ಬರ ಮಾರ್ಚ್‌ನಲ್ಲಿ ಶೇ.7.68 ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next