Advertisement

Politics: ಡಿಕೆಶಿ ನೂರಕ್ಕೆ ನೂರು ಸಿಎಂ ಆಗ್ತಾರೆ; ಪುಟ್ಟಣ್ಣ

09:03 PM May 25, 2024 | Team Udayavani |

ಚನ್ನಪಟ್ಟಣ: ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್‌ ನೂರಕ್ಕೆ ನೂರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ನಮ್ಮ ಜಿಲ್ಲೆಯವರು ಸಿಎಂ ಆಗಬೇಕೆಂಬ ಆಸೆ ನನಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ತಿಳಿಸಿದರು.

Advertisement

ಪಟ್ಟಣದಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರು ಡಿಸಿಎಂ ಡಿ.ಕೆ.ಶಿವಕುಮಾರ್‌ ನೂರಕ್ಕೆ ನೂರು ಸಿಎಂ ಆಗೇ ಆಗುತ್ತಾರೆ ಅದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಹಿಂಬಾಗಿಲಿಂದ ಬಂದು ಸಾಕಷ್ಟು ಮಂದಿ ನಮ್ಮ ರಾಜ್ಯದಲ್ಲಿ ಸಿಎಂ ಆಗಿ ಹೋಗಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಅವರ ವಿರುದ್ಧ ಬೇಸರ ಹೊರ ಹಾಕಿದರು. ಪಕ್ಷ ಅಧಿಕಾರಕ್ಕೆ ತರುವಲ್ಲಿ ಶಿವಕುಮಾರ್‌ ಪಾತ್ರ ಬಹಳಷ್ಟು ದೊಡ್ಡದಿದೆ ಎಂದರು. ನನಗೆ ಈಗಲೇ ಅವರು ಸಿಎಂ ಆಗಲಿ ಎಂಬ ಆಸೆ ಇದೆ, ಆದರೆ ಅದು ಹೈಕಮಾಂಡ್‌ ತೀರ್ಮಾನ ಎಂದರು.

 

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next