Advertisement

ಎಡನೀರು: ಕೃತಿ ಬಿಡುಗಡೆ, ಯಕ್ಷಗಾನ ಬಯಲಾಟ

07:32 PM Apr 25, 2019 | Team Udayavani |

ಎಡನೀರು: ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಡನೀರು ಇದರ ನಿರ್ದೇಶಕಿ ವಿದುಷಿ ಅನುಪಮಾ ರಾಘವೇಂದ್ರ ಅವರ “ತಲ್ಲಣಗಳ ಪಲ್ಲವಿ’ ಎಂಬ ಕನ್ನಡ ಕಥೆಗಳ ಸಂಕಲನ ಅನಾವರಣಗೊಂಡಿತು.

Advertisement

ಅನಘಾ ಭಟ್‌ ಸುಳ್ಯ ಇವರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅನುಪಮಾ ರಾಘವೇಂದ್ರ ಸ್ವಾಗತಿಸಿದರು. ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಡಾ| ರತ್ನಾಕರ ಮಲ್ಲಮೂಲೆ ಕೃತಿಯನ್ನು ಪರಿಚಯಿಸುತ್ತಾ ಹನ್ನೆರಡು ಕಥೆಗಳೂ ಬಹಳ ಉತ್ತಮವಾಗಿವೆ. ಕೆಲವು ಕತೆಗಳ ವಸ್ತು ತುಂಬಾ ಚೆನ್ನಾಗಿವೆ. ಕೆಲವೊಂದು ಕತೆಗಳು ಸಮಕಾಲೀನ ಸನ್ನಿವೇಶಕ್ಕೆ ಹೆಚ್ಚು ಪ್ರಸ್ತುತ. ಕಥಾತಂತ್ರ ಮತ್ತು ನಿರೂಪಣೆಯ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಕಥೆೆಗಾರ್ತಿ ಇನ್ನೂ ಹರಿತವಾಗಬಹುದು ಎಂದರು.

ಶ್ರೀ ಗುರುಗಳು ಕಥೆಗಾರ್ತಿಗೂ, ಪ್ರತಿಷ್ಠಾನಕ್ಕೂ ಶುಭ ಹಾರೈಸಿದರು. ರಾಘವೇಂದ್ರ ಭಟ್‌ ಉಡುಪುಮೂಲೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾಕಾರ್ಯಕ್ರಮದ ಅನಂತರ ಭಾಮಿಕಾ ಪ್ರತಿಷ್ಠಾನದ ಶಿಷ್ಯ ವೃಂದದವರಿಂದ ನೃತ್ಯ ಸಿಂಚನ ಹಾಗೂ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯ ಕಲಾವಿದರಿಂದ ಯಕ್ಷಗಾನ ಬಯಲಾಟ ಕೀಚಕ ವಧೆ – ವೀರ ಅಭಿಮನ್ಯು ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next