Advertisement

Nava Kerala ಸಭೆಗೆ ಇಂದು ಚಾಲನೆ: ಸಿಎಂ ಪಿಣರಾಯಿ,ಸಚಿವ ಸಂಪುಟ ಭಾಗಿ

11:23 PM Nov 17, 2023 | Team Udayavani |

ಕಾಸರಗೋಡು: ರಾಜ್ಯ ಮಟ್ಟದ ನವ ಕೇರಳ ಸಭೆ ನ. 18ರಂದು ಅಪರಾಹ್ನ 3.30ಕ್ಕೆ ಪೈವಳಿಕೆ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಚಾಲನೆ ನೀಡಲಾಗುವುದು.

Advertisement

ಕಾಸರಗೋಡು ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮ ನ. 19ರಂದು ಬೆಳಗ್ಗೆ 10ಕ್ಕೆ ಚೆಂಗಳ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಳಿಕ ಉದುಮ, ಹೊಸದುರ್ಗ ಮತ್ತು ತೃಕ್ಕರಿಪುರದಲ್ಲಿ ಕಾರ್ಯಕ್ರಮ ನಡೆಯುವುದು.

ಎಲ್ಲ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಸಂಪುಟದ ಎಲ್ಲ ಸಚಿವರು ಭಾಗವಹಿಸಲಿದ್ದು, ನ. 18ರಂದು ಬೆಳಗ್ಗೆ ಕಾಸರಗೋಡು ಜಿಲ್ಲೆಗೆ ಆಗಮಿಸಲಿದ್ದಾರೆ.

ಕಾರ್ಯಕ್ರಮ ನಡೆಯುವ ಪ್ರದೇಶಗಳಿಗೆ ಮುಖ್ಯಮಂತ್ರಿ ಹಾಗೂ ಸಚಿವರು ಸಾಗಲು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಸೌಕರ್ಯವಿರುವ ಕೆಎಸ್‌ಆರ್‌ಟಿಸಿಯ ವಿಶೇಷ ಬಸ್ಸನ್ನು ನ. 18ರಂದು ಮುಖ್ಯಮಂತ್ರಿ ಕಾಸರಗೋಡಿನಲ್ಲಿ ಉದ್ಘಾಟಿಸುವರು.

ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಅಪಾರ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಪೊಲೀಸರು ಹಾಗೂ ಕೋಯಿಕ್ಕೋಡ್‌, ಕಣ್ಣೂರು ಜಿಲ್ಲೆಯ ಪೊಲೀಸರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next