Advertisement

ಎಡದಂಡೆ ಮುಖ್ಯ ಕಾಲುವೆ ಕುಸಿತ

05:14 PM Jan 22, 2018 | Team Udayavani |

ಹುಣಸಗಿ: ಅಗ್ನಿ ಗ್ರಾಮದ ಬಳಿಯ 61.700 ಕಿ.ಮೀ ಬಳಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಕುಸಿದಿದ್ದು, ಸ್ಥಳಕ್ಕೆ ರವಿವಾರ ಸಂಜೆ ಮಾಜಿ ಸಚಿವ ರಾಜುಗೌಡ ಭೇಟಿ ನೀಡಿ ಪರಿಶೀಲಿಸಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಕುಸಿತಗೊಂಡಿದ್ದರೂ ಕೂಡ ಕೃಷ್ಣಾ ಭಾಗ್ಯ ಜಲ ನಿಗಮದ ಒಬ್ಬ ಹಿರಿಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದರು.

ಇಲ್ಲಿನ ನಿಮಗದ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕಾಲುವೆ ಆರ್‌ಸಿಸಿ ಲೈನಿಂಗ್‌ ಕುಸಿದ್ದರೂ ಕೂಡ ಭೇಟಿ ನೀಡಿ ಯಾವುದೇ ಕ್ರಮ ಜರುಗಿಸಲು ಮುಂದಾಗಿಲ್ಲ ಎಂದರು. ರೈತರಿಗೆ ತೊಂದರೆ ಆಗದಂತೆ ನಿಗದಿಯಂತೆ ನೀರನ್ನು
ಹರಿಸಬೇಕು. ಇಲ್ಲದಿದ್ದಲ್ಲಿ ರೈತರೊಂದಿಗೆ ಹೋರಾಟ ಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next