Advertisement

Leelavathi ನಿಧನ; ಚನ್ನಪಟ್ಟಣದಲ್ಲಿ ಶೃದ್ದಾಂಜಲಿ ಸಭೆ

11:34 AM Dec 09, 2023 | Team Udayavani |

ರಾಮನಗರ: ಶುಕ್ರವಾರ ಅಗಲಿದ ಕನ್ನಡದ ಹಿರಿಯ ನಟಿ ಲೀಲಾವತಿ ಅವರಿಗೆ ಚನ್ನಪಟ್ಟಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ನಗರದ ಕಾವೇರಿ ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಶ್ರದ್ಧಾಂಜಲಿ ಸಭೆ ಮಾಡಲಾಯಿತು. ಲೀಲಾವತಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಮೌನಾಚರಣೆ ಮಾಡಲಾಯಿತು. ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಸಂಗಡಿಗರು ನಮನ ಸಲ್ಲಿಸಿದರು.

ಹಿರಿಯ ನಟಿಯ ಸಾವು ಕನ್ನಡಕ್ಕೆ ತುಂಬಲಾರದ ನಷ್ಟ. ನಟಿಯ ಪುಣ್ಯಾತ್ಮಕ್ಕೆ ಚಿರಶಾಂತಿ ಸಿಗಲಿ. ಕೇಂದ್ರದಿಂದ ಪದ್ಮಭೂಷಣ – ರಾಜ್ಯದಿಂದ ಕರ್ನಾಟಕ ರತ್ನ ನೀಡಲಿ. ಮರಣೋತ್ತರ ಉನ್ನತ ಪ್ರಶಸ್ತಿ ನೀಡಲಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next