Advertisement

ಪಿಯು ಮೌಲ್ಯ ಮಾಪನಕ್ಕೆ ಬಹಿಷ್ಕಾರ ಬದಲು ಗೈರು

12:05 AM Feb 28, 2019 | Team Udayavani |

ಗದಗ: ಎನ್‌ಪಿಎಸ್‌, 20 ಗಂಟೆಗಳ ಕಾರ್ಯಭಾರವನ್ನು ವಿರೋಧಿಸಿ  ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ಪಿಯು ದ್ವಿತೀಯವರ್ಷದ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸುವ ಬದಲಾಗಿ ಸಾಮೂಹಿಕ ಗೈರು ಹಾಜರಾಗುವ ಮೂಲಕ ವಿನೂತನ ರೀತಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವಿ ಪೂರ್ವ ಉಪನ್ಯಾಸಕರಿಗೆ ಕಾಲ್ಪನಿಕ ವೇತನ, ಪ್ರಾಚಾರ್ಯರಿಗೆ ಪ್ರತ್ಯೇಕ ವೇತನ ಶ್ರೇಣಿ ಸರಿಪಡಿಸುವುದು, ಎನ್‌ಪಿಎಸ್‌ ರದ್ದುಗೊಳಿಸುವುದು, 20 ಗಂಟೆಗಳ ಕಾರ್ಯಭಾರ ನಿಯಮಕ್ಕೆ ತಿದ್ದುಪಡಿ ತರಬೇಕು ಎಂದು ಸೇರಿದಂತೆ ಮತ್ತಿತರೆ ಬೇಡಿಕೆಗಳಿಗೆ ಸರ್ಕಾರ ಮನ್ನಣೆ ನೀಡುತ್ತಿಲ್ಲ ಹೀಗಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next