Advertisement

ಬೈರೂತ್ ಮಹಾಸ್ಫೋಟಕ್ಕೆ ತಲೆದಂಡ! ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ

11:17 PM Aug 10, 2020 | Nagendra Trasi |

ಬೈರೂತ್: ಬೈರೂತ್ ಬಂದರು ಪ್ರದೇಶದಲ್ಲಿ ಸಂಭವಿಸಿದ ಭಾರೀ ಪ್ರಮಾನದ ಸ್ಫೋಟದ ಹಿನ್ನೆಲೆಯಲ್ಲಿ ದಶಕಗಳ ಕಾಲದ ಅದಕ್ಷ ಆಡಳಿತ ಎಂಬ ಆರೋಪದ ನಿಟ್ಟಿನಲ್ಲಿ ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ಸೋಮವಾರ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದಿರುವುದಾಗಿ ವರದಿ ತಿಳಿಸಿದ್ದಾರೆ.

Advertisement

ಇಂದು ನಾವು ಜನರೆಡೆಗೆ ಲಕ್ಷ್ಯ ಕೊಡುತ್ತಿದ್ದೇವೆ. ಈ ದುರಂತಕ್ಕೆ ಯಾರು ಹೊಣೆಗಾರರು ಎಂಬ ಬೇಡಿಕೆಗೆ ಹೊಣೆ ಹೊರಬೇಕಾಗಿದೆ ಎಂದು ಟೆಲಿವಿಷನ್ ಉದ್ದೇಶಿಸಿ ಮಾತನಾಡುತ್ತ ದಿಯಾ ತಿಳಿಸಿದ್ದಾರೆ.

ಕಳೆದ ಮೂರು ದಶಕಗಳ ಭ್ರಷ್ಟ ರಾಜಕೀಯ ಆಡಳಿತದಿಂದಾಗಿ ಆಗಸ್ಟ್ 4ರಂದು ಸ್ಫೋಟ ಸಂಭವಿಸಲು ಕಾರಣವಾಗಿದೆ ಎಂದು ಆರೋಪಿಸಿರುವುದಾಗಿ ವರದಿ ತಿಳಿಸಿದೆ. ಈ ನಿಟ್ಟಿನಲ್ಲಿ ನಾನು ನನ್ನ ಸರ್ಕಾರಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಿಸಿದ್ದರು.

ಲೆಬನಾನ್ ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 160ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. 6000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 20 ಮಂದಿ ನಾಪತ್ತೆಯಾಗಿದ್ದರು ಎಂದು ವರದಿ ತಿಳಿಸಿತ್ತು.

ಸ್ಫೋಟ ಸಂಭವಿಸಿದ ಗ್ರೌಂಡ್ ಜೀರೋ ಪ್ರದೇಶದಲ್ಲಿ ಶ್ವಾನದಳ ತಂಡ ಮತ್ತು ಅತ್ಯಾಧುನಿಕ ತಂತ್ರಜ್ಞರ ತಂಡ ಶೋಧ ಕಾರ್ಯ ನಡೆಸುತ್ತಿದೆ. ಶವ ಹಾಗೂ ಇತರರಿಗಾಗಿ ಈ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next