Advertisement

ಒಂದು ತಿಂಗಳಿಂದ ಕೆಲಸ ಬಿಟ್ಟು ಪಡಿತರಕ್ಕಾಗಿ ಅಲೆದಾಟ

07:20 PM Jan 28, 2020 | Suhan S |

ಕೆ.ಆರ್‌.ಪೇಟೆ: ತಾಲೂಕಿನಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಓಪನ್‌ ಆಗದ ಆ್ಯಪ್‌ ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳಲ್ಲಿ ಮಾತ್ರ ಹಣ ನೀಡಿದರೆ ಓಪನ್‌ ಆಗುತ್ತಿರುವ ಬಗ್ಗೆ ಅಧಿಕಾರಿಗಳ ಮೇಲೆ ಜನರಲ್ಲಿ ಅನುಮಾನ ಮೂಡುತ್ತಿದೆ.

Advertisement

ಪಡಿತರು ವಿತರಣೆಯಲ್ಲಿ ಅಕ್ರಮ ತಡೆಯುವ ಸಲುವಾಗಿ ಸರ್ಕಾರ ಆಧಾರ್‌ ಲಿಂಕ್‌ ಮಾಡಿಸುವ ಜೊತೆಗೆ ಪಡಿತರ ವಿತರಣೆ ಮಾಡುವ ಮುನ್ನ ಕಾರ್ಡ್‌ ನಲ್ಲಿರುವ ವ್ಯಕ್ತಿ ಬಂದು ಅವರ ಹೆಬ್ಬೆಟ್ಟನ್ನು ಕಂಪ್ಯೂಟರ್‌ಗೆ ನೀಡಿದ ಬಳಿಕವಷ್ಟೇ ಸರ್ಕಾರದಿಂದ ಅವರ ಕಾರ್ಡ್‌ಗೆ ಪಡಿತರ ಬಿಡುಗಡೆಯಾಗುತ್ತದೆ. ಆದರೆ ತಾಲೂಕು ಸೇರಿದಂತೆ ರಾಜ್ಯದಲ್ಲಿಯೇ ಪಡಿತರ ವಿತರಣಾ ಆಪ್‌ಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಜನವರಿ ತಿಂಗಳು ಮುಗಿಯುತ್ತಿದ್ದರೂ ಇದು ವರೆಗೂ ತಾಲೂಕಿನ ಯಾವ ನ್ಯಾಯಬೆಲೆ ಅಂಗಡಿ ಯಲ್ಲೂ ಪಡಿತರ ವಿತರಿಸಿಲ್ಲ. ತಾಲೂಕಿನಲ್ಲಿ ಹೆಬ್ಬೆಟ್ಟು ಪಡೆಯುವ ಆಪ್‌ ಸಮಸ್ಯೆಯಿಂದ ಜನರು ಒಂದು ವಾರದಿಂದ ಪಡಿತರ ಪಡೆಯಲು ಅಲೆದಾಡುತ್ತಿದ್ದಾರೆ.

ಪರಿತರಕ್ಕೆ ನಾಲ್ಕೇ ದಿನ ಬಾಕಿ: ನಾಲ್ಕು ದಿನ ಕಳೆದರೆ ಜನವರಿ ತಿಂಗಳು ಮುಕ್ತಾಯವಾಗಿ ಫೆಬ್ರವರಿ ತಿಂಗಳು ಆರಂಭವಾಗುತ್ತದೆ. ಜನವರಿ ತಿಂಗಳ ಬಾಪು ಪಡಿತರ ಫೆಬ್ರವರಿ ತಿಂಗಳು ನೀಡುವುದಿಲ್ಲ. ಸಮಸ್ಯೆ ಅರಿತಿರುವ ಮಡಿಕೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜನವರಿ ತಿಂಗಳ ಪಡಿತರ ಹಿಂದಿನ ಪದ್ಧತಿಯಂತೆ ವಿತರಿಸಲು ಅನುಮತಿ ನೀಡಲಾಗಿದೆ. ಮಂಡ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕೆಂದು ಪಡಿತರದಾರರು ಮನವಿ ಮಾಡಿದ್ದಾರೆ.

ಕಂಪ್ಯೂಟರ್‌ ಸೆಂಟರ್‌ಗಳಲ್ಲಿ: ಸರ್ಕಾರದಿಂದ ತೆರೆದಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣಾ ಆಪ್‌ ಓಪನ್‌ ಆಗದೆ, ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳಲ್ಲಿ ಮಾತ್ರ ಓಪನ್‌ ಆಗುತ್ತಿರುವುದನ್ನು ಕಂಡು ಪಡಿತರದಾರರು ಹಣ ಕೊಟ್ಟರೂ ಪರವಾಗಿಲ್ಲ, ಸದ್ಯ ಆ್ಯಪ್‌ ಓಪನ್‌ ಆಗಿ ಹೆಬ್ಬಟ್ಟು ಕೊಟ್ಟರೆ ಸಾಕೆಂದು ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳ ಮುಂದೆ ಕೆಲಸ ಬಿಟ್ಟು ಸರದಿಯಲ್ಲಿ ನಿಂತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next