Advertisement

Lok Sabha Election: ರಾಜಕೀಯ ಬಿಟ್ಟು ಕೃಷಿ ಮಾಡುವೆ: ಸಂಗಣ್ಣ ಕರಡಿ

11:27 PM Mar 15, 2024 | Team Udayavani |

ಸಿಂಧನೂರು: 1978ರಿಂದ ಇಲ್ಲಿವರೆಗೂ ನನಗೆ ರಾಜಕೀಯ ಬಿಟ್ಟರೆ ಬೇರೆ ಉದ್ಯೋಗ ಇರಲಿಲ್ಲ. ಇನ್ಮುಂದೆ ರಾಜಕೀಯ ಬಿಟ್ಟು ನಾನು ಕೃಷಿ ಮಾಡು ಹೋಗುತ್ತೇನೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ರೈಲು ಸಂಚಾರಕ್ಕೆ ಹಸುರು ನಿಶಾನೆ ತೋರಿಸಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಾನು ಕೂಡ ದೊಡ್ಡ ಕುಟುಂಬದ ಹಿನ್ನೆಲೆಯಿಂದ ಬಂದವನಲ್ಲ. ಅವಿಭಕ್ತ ಕುಟುಂಬಕ್ಕೆ 28 ಎಕ್ರೆ ಭೂಮಿಯಿತ್ತು. ನಮಗೆ 14 ಎಕ್ರೆ ಭೂಮಿ ಬಂತು. ಎರಡು ಬಾರಿ ಶಾಸಕ, ಎರಡು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನಗೆ ಇದೆಲ್ಲ ಸಾಧ್ಯವಾಗಿದ್ದು ಜನರ ಬೆಂಬಲದಿಂದ. ಅವರನ್ನು ಎಂದಿಗೂ ಮರೆಯುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next