Advertisement

ಕಾಂಗ್ರೆಸ್‌ ತೊರೆಯುವುದಾಗಿ ಹೇಳಿಲ್ಲ: ಪ್ರಕಾಶ್‌ ಹುಕ್ಕೇರಿ

03:45 AM Feb 06, 2017 | |

ಅಥಣಿ: ಎಸ್‌.ಎಂ. ಕೃಷ್ಣ  ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ನನ್ನ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಸಹಕಾರ ನೀಡಿದ್ದರಿಂದ ಅವರ ಮನವೊಲಿಸಿ ಕಾಂಗ್ರೆಸ್‌ ಪಕ್ಷದಲ್ಲಿಯೇ ಅವರನ್ನು ಉಳಿಸಿಕೊಳ್ಳುವುದಾಗಿ ಹೇಳಿದ್ದೇನೆಯೇ ಹೊರತು ನಾನೂ  ಕಾಂಗ್ರೆಸ್‌ ತೊರೆಯುತ್ತೇನೆ ಎಂದು ಹೇಳಿರಲಿಲ್ಲ ಎಂದು ಚಿಕ್ಕೋಡಿ ಸಂಸದ ಪ್ರಕಾಶ್‌ ಹುಕ್ಕೇರಿ ಸ್ಪಷ್ಟಪಡಿಸಿದರು.

Advertisement

ಹುಲಗಬಾಳಿ ಗ್ರಾಮದಲ್ಲಿ ಭಾನುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಾವು ಯಾವಗಲೂ ಕಾಂಗ್ರೆಸ್ಸಿಗ. ತಮ್ಮ ನಡಿಗೆ ಯಾವಾಗಲೂ ಕಾಂಗ್ರೆಸ್ಸಿನೆಡೆಗೆ ಇರುತ್ತದೆಯೇ ಹೊರತು ಬೇರೆ ಪಕ್ಷದತ್ತ ಇಲ್ಲ. ಕೃಷ್ಣ ಅವರು ಪಕ್ಷದಲ್ಲೇ ಮುಂದುವರಿಯುವಂತೆ ಹಿರಿಯ ನಾಯಕ ದಿಗ್ವಿಜಯ್‌ಸಿಂಗ್‌ ಪ್ರಯತ್ನಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next